ನವದೆಹಲಿ: ಪ್ರಾಣಿ ಹಕ್ಕುಗಳ ಕಾರ್ಯಕರ್ತೆ, ಪರಿಸರವಾದಿ ಹಾಗೂ ಸಂಸದೆ ಮೇನಕಾ ಗಾಂಧಿ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಸುಳ್ಳು ಎಂದು ನಿರಾಕರಿಸಿರುವ ಇಸ್ಕಾನ್, ಆಕೆಯ ಹೇಳಿಕೆ ಬಗ್ಗೆ ಖಂಡನೆಯನ್ನೂ ವ್ಯಕ್ತಪಡಿಸಿದೆ.
ಇಸ್ಕಾನ್ನ ಅನಂತಪುರ ಗೋಶಾಲೆಯ ಬಗ್ಗೆ ಮೇನಕಾ ಗಾಂಧಿ ಸುಳ್ಳು ಮಾಹಿತಿಯನ್ನು ಹಬ್ಬಿಸುತ್ತಿದ್ದಾರೆ. ಆಶ್ರಮದ 246 ಹಸುಗಳು ಹಾಲು ನೀಡುತ್ತಿಲ್ಲವಾದರೂ ಅವುಗಳನ್ನು ಉಳಿದ ಹಸುಗಳಂತೆಯೇ ಪ್ರೀತಿಯಿಂದ ನೋಡಿಕೊಳ್ಳಲಾಗುತ್ತಿದೆ ಎಂದು ಇಸ್ಕಾನ್ನ ಕಮ್ಯುನಿಕೇಷನ್ಸ್ ಡೈರೆಕ್ಟರ್ ವೃಜೇಂದ್ರ ನಂದನ್ ದಾಸ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮೇನಕಾ ಗಾಂಧಿ, ಇಸ್ಕಾನ್ ವಂಚಕ ಸಂಸ್ಥೆ ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇಸ್ಕಾನ್ ಗೋಶಾಲೆಗಳನ್ನು ನಡೆಸುತ್ತಿದ್ದು, ಆ ಮೂಲಕ ಸರ್ಕಾರದಿಂದ ಜಮೀನು ಮತ್ತಿತರ ಸೌಲಭ್ಯಗಳನ್ನು ಪಡೆಯುತ್ತಿದೆ. ಆದರೆ ಇಸ್ಕಾನ್ ಹಸುಗಳನ್ನು ಕಟುಕರಿಗೆ ಮಾರುತ್ತಿದೆ ಎಂದು ಆಕೆ ಹೇಳಿದ್ದರು.
ಒಂದು ಪೊಂಗಲ್ ತಿನ್ನುವ ಸಮಯದಲ್ಲಿ ಕಾವೇರಿ ನೀರಿನ ಸಮಸ್ಯೆ ಬಗೆಹರಿಸಬಹುದಿತ್ತು: ಬಿಜೆಪಿ ಹೀಗಂದಿದ್ದೇಕೆ?
ಕಾವೇರಿ ನದಿ ನೀರು ವಿವಾದ: ಪ್ರಧಾನಿ ಮಧ್ಯಸ್ಥಿಕೆ ವಹಿಸಲಿ ಎಂದ ಸಿಎಂ ಸಿದ್ದರಾಮಯ್ಯ