More

    ಅಕ್ರಮವಾಗಿ ಸಾಗಿಸುತ್ತಿದ್ದ 55 ಕ್ವಿಂಟಾಲ್ ಪಡಿತರ ಅಕ್ಕಿ ವಶ

    ರಾಣೆಬೆನ್ನೂರ: ಅಕ್ರಮವಾಗಿ ಸಾಗಿಸುತ್ತಿದ್ದ 55 ಕ್ವಿಂಟಾಲ್ ಪಡಿತರ ಅಕ್ಕಿ ಚೀಲಗಳನ್ನು ವಾಹನ ಸಮೇತ ಸಾರ್ವಜನಿಕರು ಅಧಿಕಾರಿಗಳಿಗೆ ಹಿಡಿದುಕೊಟ್ಟ ಘಟನೆ ನಗರದ ಮಾಗೋಡ ರಸ್ತೆಯಲ್ಲಿ ನಡೆದಿದೆ.
    ಯಾರೋ ಖದೀಮರು ಅಕ್ರಮವಾಗಿ 116 ಚೀಲಗಳಲ್ಲಿ 55 ಕ್ವಿಂಟಾಲ್ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ನಂಬರ್ ಪ್ಲೇಟ್ ಇಲ್ಲದ ವಾಹನದಲ್ಲಿ ಸಾಗಿಸುತ್ತಿದ್ದರು. ಈ ಕುರಿತು ಮಾಹಿತಿ ತಿಳಿದ ತಾಲೂಕಿನ ಹುಲ್ಲತ್ತಿ ಗ್ರಾಮದ ಜಗದೀಶ ಕೆರೂಡಿ ಹಾಗೂ ಸ್ನೇಹಿತರು ಸೇರಿ ವಾಹನ ತಡೆದು ವಿಚಾರಿಸಿದಾಗ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಕುರಿತು ಚಾಲಕರು ಒಪ್ಪಿಕೊಂಡಿದ್ದಾರೆ.
    ಈ ಬಗ್ಗೆ ಜಗದೀಶ ಕೆರೂಡಿ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದಂತೆ ವಾಹನದ ಚಾಲಕರು ಅಲ್ಲಿಂದ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬಂದ ಆಹಾರ ಇಲಾಖೆಯ ಶಿರಸ್ತೇದಾರ ಎಂ.ಎಸ್. ಪಾಟೀಲ, ಆಹಾರ ನಿರೀಕ್ಷಕರಾದ ನಾಗರಾಜ ಭಟ್, ಎಸ್.ಸಿ. ಅಂಗಡಿ ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts