More

    ಹೆಂಡ್ತಿ ಅದೇನ್​ ಮ್ಯಾಜಿಕ್​ ಮಾಡಿದ್ದಾಳೋ? ತಂದೆಯ ಶಾಕಿಂಗ್​ ಹೇಳಿಕೆಗೆ ಜಡ್ಡು ಉತ್ತರ ಹೀಗಿತ್ತು…

    ನವದೆಹಲಿ: ಮಗ ಮತ್ತು ಸೊಸೆಯ ಜತೆಗಿನ ಸಂಬಂಧ ಹಳಸಿದೆ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ತಂದೆ ಮಾಡಿದ ಸ್ಫೋಟಕ ಆರೋಪಗಳಿಗೆ ಟೀಮ್​ ಇಂಡಿಯಾದ ಆಲ್​ರೌಂಡರ್​ ರವೀಂದ್ರ ಜಡೇಜಾ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿದ್ದಾರೆ.

    ದಿವ್ಯಾ ಭಾಸ್ಕರ್​ ಸಂದರ್ಶನದಲ್ಲಿ ಹೇಳಿದ ಎಲ್ಲ ವಿಷಯಗಳು ಅರ್ಥಹೀನ ಮತ್ತು ಅಸತ್ಯವಾದದ್ದು. ಒಂದು ಕಡೆಯ ಹೇಳಿಕೆ ಮಾತ್ರ ಹೇಳಲಾಗಿದೆ. ನನ್ನ ಪತ್ನಿಯ ಹೆಸರು ಕೆಡಿಸುವ ಪ್ರಯತ್ನಗಳು ನಡೆಯುತ್ತಿವೆ. ಇದು ನಿಜಕ್ಕೂ ಖಂಡನೀಯ ಮತ್ತು ಅಸಭ್ಯ. ನನಗೂ ಹೇಳಲು ಸಾಕಷ್ಟಿದೆ ಆದರೆ, ನಾನದನ್ನು ಸಾರ್ವಜನಿಕವಾಗಿ ಹೇಳುವುದಿಲ್ಲ ಎಂದು ರವೀಂದ್ರ ಜಡೇಜಾ ಹೇಳಿದ್ದಾರೆ. ಅಲ್ಲದೆ, ಸ್ಕ್ರಿಪ್ಟೆಡ್ ಸಂದರ್ಶನಗಳನ್ನು ನಿರ್ಲಕ್ಷಿಸುವುದು ಉತ್ತಮ ಎಂದು ಅಡಿಬರಹ ಸಹ ನೀಡಿದ್ದಾರೆ.

    ಸಂದರ್ಶನದಲ್ಲಿ ಮಾತನಾಡಿದ್ದ ಜಡೇಜಾ ತಂದೆ ಅನಿರುಧ್‌ಸಿನ್ಹ ಜಡೇಜಾ, ಮಗನ ಮದುವೆ ಬಳಿಕ ಎಲ್ಲವೂ ಹೇಗೆ ಬದಲಾಯಿತು ಎಂಬುದನ್ನು ವಿವರಿಸಿದ್ದಾರೆ ಮತ್ತು ಪ್ರಸ್ತುತ ಜಾಮ್​ನಗರದಲ್ಲಿ ಏಕಾಂಗಿಯಾಗಿ ಜೀವಿಸುತ್ತಿರುವುದಾಗಿ ತಿಳಿಸಿದ್ದಾರೆ. ನಾನು ನಿಮಗೆ ಸತ್ಯವೊಂದನ್ನು ಹೇಳಬೇಕೆಂದು ನೀವು ಬಯಸುತ್ತೀರಾ? ಮಗ ರವೀಂದ್ರ ಮತ್ತು ಸೊಸೆ ರವಿವಾ ಜತೆ ನನಗೆ ಯಾವುದೇ ರೀತಿಯ ಸಂಬಂಧವಿಲ್ಲ. ನಾನು ಕೂಡ ಅವರಿಗೆ ಕರೆ ಮಾಡುವುದಿಲ್ಲ ಮತ್ತು ಅವರು ಕೂಡ ನಮಗೆ ಕರೆ ಮಾಡಲ್ಲ. ಮದುವೆಯಾದ ಎರಡರಿಂದ ಮೂರು ತಿಂಗಳ ಬಳಿಕ ಸಂಬಂಧ ಹಳಸಲು ಆರಂಭಿಸಿತು ಎಂದು ಅನಿರುಧ್‌ಸಿನ್ಹ ಜಡೇಜಾ ಸಂದರ್ಶನದಲ್ಲಿ ಹೇಳಿದ್ದಾರೆ.

    ನಾನು ಪ್ರಸ್ತುತ ಜಾಮ್​ನಗರದಲ್ಲಿ ವಾಸವಿದ್ದೇನೆ. ರವೀಂದ್ರ ತನ್ನದೇಯಾದ ಪ್ರತ್ಯೇಕ ಬಂಗಲೆಯಲ್ಲಿ ವಾಸವಿದ್ದಾನೆ. ಒಂದೇ ನಗರದಲ್ಲಿ ವಾಸಿಸುತ್ತಿದ್ದೇವೆ. ಆದರೆ, ಒಬ್ಬರನೊಬ್ಬರನ್ನು ನೋಡಿಲ್ಲ. ಮಗನ ಪತ್ನಿ ಅದೇನ್​ ಮ್ಯಾಜಿಕ್​ ಮಾಡಿದ್ದಾಳೋ ಗೊತ್ತಿಲ್ಲ. ಆತ ನನ್ನ ಮಗ ಅಂದುಕೊಂಡರೆ ನನ್ನ ಹೃದಯ ಸುಡುತ್ತದೆ. ಆತ ಕ್ರಿಕೆಟಿಗ ಆಗದೇ ಇದ್ದಿದ್ದರೆ ಚೆನ್ನಾಗಿತ್ತು. ನಾವು ಇದನ್ನೆಲ್ಲ ಅನುಭವಿಸಬೇಕಾಗಿರಲಿಲ್ಲ ಎಂದು ದಿವ್ಯ ಭಾಸ್ಕರ್​ ಸಂದರ್ಶನದಲ್ಲಿ ಜಡೇಜಾ ತಂದೆ ತಿಳಿಸಿದ್ದಾರೆ.

    ಮದುವೆಯಾದ ಮೂರು ತಿಂಗಳೊಳಗೆ ಎಲ್ಲವನ್ನೂ ತನ್ನ ಹೆಸರಿಗೆ ವರ್ಗಾಯಿಸಬೇಕೆಂದು ಸೊಸೆ ನನಗೆ ಹೇಳಿದಳು. ಅವಳು ನಮ್ಮ ಸಂಸಾರದಲ್ಲಿ ಬಿರುಕು ಮೂಡಿಸಿದಳು. ಅವಳು ತುಂಬು ಕುಟುಂಬವನ್ನು ಬಯಸಲಿಲ್ಲ ಮತ್ತು ಸ್ವತಂತ್ರ ಜೀವನವನ್ನು ಬಯಸಿದಳು. ನನ್ನದು ತಪ್ಪಾಗಿರಬಹುದು ಮತ್ತು ನಯನಾಬಾ (ಜಡೇಜಾ ಸಹೋದರಿ)ಳದು ತಪ್ಪಾಗಿರಬಹುದು, ಆದರೆ ನಮ್ಮ ಕುಟುಂಬದ ಎಲ್ಲಾ 50 ಸದಸ್ಯರು ಹೇಗೆ ತಪ್ಪು ಮಾಡಬಹುದು? ಕುಟುಂಬದಲ್ಲಿ ಯಾರೊಂದಿಗೂ ಯಾವುದೇ ಸಂಬಂಧವನ್ನು ಹೊಂದಿಲ್ಲ. ಕೇವಲ ದ್ವೇಷವಿದೆ ಎಂದು ಸೊಸೆಯ ವಿರುದ್ಧ ಜಡೇಜಾ ತಂದೆ ಹರಿಹಾಯ್ದಿದ್ದಾರೆ.

    ನನಗೆ ಏನನ್ನೂ ಮುಚ್ಚಿಡಲು ಇಷ್ಟವಿಲ್ಲ. ಐದು ವರ್ಷಗಳಿಂದ ನಮ್ಮ ಮೊಮ್ಮಗಳ ಮುಖವನ್ನೂ ನೋಡಿಲ್ಲ. ರವೀಂದ್ರನ ಅತ್ತೆಯವರು ಎಲ್ಲವನ್ನೂ ನಿರ್ವಹಿಸುತ್ತಾರೆ. ಅವರು ಎಲ್ಲದರಲ್ಲೂ ಹಸ್ತಕ್ಷೇಪ ಮಾಡುತ್ತಾರೆ ಎಂದು ಜಡೇಜಾ ತಂದೆ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. (ಏಜೆನ್ಸೀಸ್​)

    ಅಪಾರ ಸಂಪತ್ತಿದ್ದರೂ ಇವರು ಶ್ರೀಮಂತ ನಟ ಅಲ್ಲ, ಅವರಾರೆಂದು ತಿಳಿದರೆ ಆಶ್ಚರ್ಯಪಡುತ್ತೀರಿ..!

    ರೈಲಿನಡಿ ಸಿಲುಕಿದ ವ್ಯಕ್ತಿ ರಕ್ಷಿಸಲು ಕೋಚ್​ ಅನ್ನೇ ಪಕ್ಕಕ್ಕೆ ತಳ್ಳಿದ ಪ್ರಯಾಣಿಕರು! ವೀಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts