More

    ತಹಸೀಲ್ದಾರ್‌ರಿಂದ ಮತಗಟ್ಟೆ ಸ್ಥಳ ಪರಿಶೀಲನೆ

    ಬೆಟ್ಟದಪುರ: ಮತಗಟ್ಟೆ ತೆರೆಯುವ ಹಿನ್ನೆಲೆ ಸಮೀಪದ ಚಪ್ಪರದಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗುರುವಾರ ಸಹಾಯಕ ಮತದಾರರ ನೋಂದಣಾಧಿಕಾರಿಯೂ ಆದ ತಹಸೀಲ್ದಾರ್ ಸುರೇಂದ್ರಮೂರ್ತಿ ಭೇಟಿ ನೀಡಿ ಅಗತ್ಯ ಮೂಲ ಸೌಕರ್ಯ ಪರಿಶೀಲನೆ ನಡೆಸಿದರು.


    ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ನಡೆಯುವ ಮತಗಟ್ಟೆಗಳಿಗೆ ಭೇಟಿ ನೀಡಿ ಮೂಲ ಸೌಕರ್ಯ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು


    ಗ್ರಾಮ ಆಡಳಿತಾಧಿಕಾರಿ ಪ್ರದೀಪ್, ದೀಪಕ್, ಮಹೇಶ್, ರತ್ನಾ, ಮುಖ್ಯಶಿಕ್ಷಕ ಶಿವಾನಂದ್, ಶಿಕ್ಷಕರಾದ ಗಾಲಿಸಾಬ್ ಬಾಗಲಕೋಟೆ, ಸಿಬ್ಬಂದಿ ತಿಮ್ಮಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts