ವಿಜಯವಾಣಿ ಸುದ್ದಿಜಾಲ ಉಡುಪಿ
ಪ್ರತಿಷ್ಠಾಪನಾ ಕಲೆಗೆ ಪೂರಕ ವಾತಾವರಣ ಕಲ್ಪಿಸಿದಷ್ಟು ಕಲೆಯ ವಿಸ್ತಾರತೆ ಆಗಲು ಸಾಧ್ಯ. ಇನ್ನರ್ ಸೆನ್ಸ್ನಂತಹ ವಿಶಿಷ್ಟ ಕಲೆಯನ್ನು ಜನರಿಗೆ ಪರಿಚಯಿಸಲು ತ್ರಿವರ್ಣ ಆರ್ಟ್ ಗ್ಯಾಲರಿ ಮುಂದಾಗಿರುವುದು ಶ್ಲಾನೀಯ. ಇಂತಹ ಚಟುವಟಿಕೆ ನಿರಂತರ ನಡೆಯುವಂತಾಗಬೇಕು ಎಂದು ಹಿರಿಯ ಕಲಾವಿದ ಮತ್ತು ಆರ್ಟಿಸ್ಟ್ ೋರಂನ ಅಧ್ಯಕ್ಷ ರಮೇಶ್ ರಾವ್ ಹೇಳಿದರು.
ವಿಶ್ವದ ಅತಿಶ್ರೇಷ್ಠ ವರ್ಣ ಚಿತ್ರಕಾರ ಲಿಯಾನಾರ್ಡೋ ಡಾ. ವಿನ್ಸಿ ಜನ್ಮದಿನದ ಸ್ಮರಣಾರ್ಥ ಮಣಿಪಾಲದ ತ್ರಿವರ್ಣ ಆರ್ಟ್ ಗ್ಯಾಲರಿಯಲ್ಲಿ ಭಾನುವಾರ ಆಯೋಜಿಸಿದ್ದ ‘ಇನ್ನರ್ ಸೆನ್ಸ್’ ಪ್ರತಿಷ್ಠಾಪನಾ ಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಉಡುಪಿಯ ಯ್ಯಾಂ ಕೇರ್ ಕ್ಲಿನಿಕ್ನ ರೊ. ಡಾ. ಕೆ. ಸುರೇಶ್ ಶೆಣೈ ಮಾತನಾಡಿ, ಯುವ ಸಮುದಾಯ ಇಂತಹ ವಿಶಿಷ್ಟ ಕಲೆಯಲ್ಲಿ ತೊಡಗಿಕೊಂಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿದರು.
ಸಂಸ್ಥೆಯ ಕಲಾ ವಿದ್ಯಾರ್ಥಿಗಳಾದ ಅನಿರುದ್ಧ ನಾಯ್ಕ್, ಪ್ರಸಾದ್ ಆರ್., ಯಶ್ಮಿತಾ ಗಣೇಶ್ ಉಪಸ್ಥಿತರಿದ್ದರು. ಅನುಷಾ ಆಚಾರ್ಯ ಪ್ರಾರ್ಥಿಸಿದರು. ಕೇಂದ್ರದ ಮಾರ್ಗದರ್ಶಕ ಹರೀಶ್ ಸಾಗಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಜ್ವಲ್ ನಿಟ್ಟೆ ವಂದಿಸಿದರು. ಚೇತನಾ ಗಣೇಶ್ ಕಾರ್ಯಕ್ರಮ ನಿರೂಪಿಸಿದರು.
ಆಕರ್ಷಕ ನೆರಳು-ಬೆಳಕಿನ ಸಂಯೋಜನೆ
ಕಲೆಯ ವಿವಿಧ ಮಜಲುಗಳಾದ ಚಿತ್ರ, ಶಿಲ್ಪ, ವಾಸ್ತುಶಿಲ್ಪ, ಸಂಗೀತ, ಸಾಹಿತ್ಯ, ನಾಟ್ಯ, ನಾಟಕದಂತಹ ಲಲಿತ ಕಲೆಗಳೇ ಇನ್ನರ್ ಸೆನ್ಸ್ನ ಕೇಂದ್ರಬಿಂದುವಾಗಿತ್ತು. ಸಂಸ್ಥೆಯ ವಿದ್ಯಾರ್ಥಿಗಳೇ ಕಾಗದ, ರಟ್ಟು, ಅಂಟು, ಮಣ್ಣು, ಮರಳು, ಹಗ್ಗ, ಬುಟ್ಟಿ, ಬಟ್ಟೆ, ರಂಗೋಲಿ ಪೌಡರ್, ಸರಿಗೆಯಂತಹ ಕಚ್ಚಾ ವಸ್ತು ಬಳಸಿ ವಿವಿಧ ಕಲೆ ತಯಾರಿಸಿದ್ದರು. ನೆರಳು-ಬೆಳಕಿನ ಸಂಯೋಜನೆಯಡಿ ಪ್ರದರ್ಶನಗೊಂಡ ಈ ವಿಶಿಷ್ಟ ಕಲೆ ಜನರ ಗಮನ ಸೆಳೆಯಿತು. ಏ.16ರ ಸಂಜೆ 7:30ರ ವರೆಗೆ ಪ್ರದರ್ಶನ ಇರಲಿದೆ.