ನವದೆಹಲಿ: 2020ರಲ್ಲಿ ಭಾರತವು ಮೂರನೇ ಚಂದ್ರಯಾನವನ್ನು ಆರಂಭಿಸಲಿದೆ ಎಂದು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಚಂದ್ರಯಾನ- 3 ರಲ್ಲಿ ಲ್ಯಾಂಡರ್ ಮತ್ತು ರೋವರ್ಗಳು ಈ ಬಾರಿ ಮೃದುವಾಗಿ ಚಂದ್ರನ ಮೇಲೆ ಇಳಿಯಲಿವೆ ಎಂದಿದ್ದಾರೆ.
ಚಂದ್ರಯಾನ -2ರಲ್ಲಿ ನಾವು ಸೋತಿಲ್ಲ. ಅದರಿಂದ ನಾವು ತುಂಬ ಕಲಿತಿದ್ದೇವೆ. ಪ್ರಪಂಚದಲ್ಲಿ ಯಾವ ದೇಶವೂ ಮೊದಲ ಬಾರಿಗೆ ಚಂದ್ರನ ಮೇಲೆ ಇಳಿದಿಲ್ಲ. ಅಮೆರಿಕ ದೇಶ ಕೂಡ ಸಾಕಷ್ಟು ಬಾರಿ ಪ್ರಯತ್ನಿಸಿದೆ. ಆದರೆ ನಮಗೆ ಅಷ್ಟು ಪ್ರಯತ್ನಗಳು ಬೇಕಾಗಿಲ್ಲ ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಚಂದ್ರಯಾನ 2 ಭಾರತದ ಮೊದಲ ಪ್ರಯತ್ನವಾಗಿತ್ತು. ಚಂದ್ರನನ್ನು ತಲುಪಲು ಕೇವಲ 2.1 ಕಿಲೋ ಮೀಟರ್ ಅಂತರದಲ್ಲಿ ಕೈತಪ್ಪಿತು. ಸೆಪ್ಟೆಂಬರ್ 7ರಂದು ನಿಗದಿತ ಸ್ಥಳದಿಂದ 500 ಮೀಟರ್ಗಳ ಅಂತರದಲ್ಲಿ ವಿಕ್ರಮ್ ಲ್ಯಾಂಡರ್ ಕೈ ತಪ್ಪಿತು.
ವಿಕ್ರಮ್ ಲ್ಯಾಂಡರ್ ಹಾರ್ಡ್ ಲ್ಯಾಂಡ್ ಆಗಿದ್ದನ್ನು ಅಧಿಕಾರಿಗಳ ದೃಢಪಡಿಸಿದ್ದಾರೆ ಎಂದು ಸಚಿವ ಜಿತೇಂದ್ರ ಸಿಂಗ್ ತಿಳಿಸಿದರು.
ನಾವು ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿದರೆ ವಿಶ್ವದ ನಾಲ್ಕನೇ ದೇಶವಾಗಿ ಹೊರ ಹೊಮ್ಮಲಿದ್ದೇವೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಯುಎಸ್ಎಸ್ಆರ್ ಮತ್ತು ಚೀನಾಗಳು ಈಗಾಗಲೇ ಇಳಿದ ದೇಶಗಳಾಗಿವೆ.
ಈ ಬಾರಿ ಲ್ಯಾಂಡರ್ನ ವೇಗವನ್ನು ಕಡಿಮೆಗೊಳಿಸಲಾಗುವುದು ಎಂದು ಸಚಿವರು ಪಾರ್ಲಿಮೆಂಟ್ನಲ್ಲಿ ತಿಳಿಸಿದ್ದಾರೆ. ಲ್ಯಾಂಡರ್ನ ವೇಗವನ್ನು 1683 ಮೋಟರ್ಶಿಪ್ ವೇಗದಿಂದ 146 ಮೋಟರ್ಶಿಪ್ ವೇಗಕ್ಕೆ ತಗ್ಗಿಸಲಾಗುವುದು ಎಂದರು.
ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆಗುವಾಗ 21 ಭಾಗವಾಗಿ ಬಿದ್ದಿರುವುದನ್ನು ಫೊಟೋಗಳನ್ನು ನಾಸಾ ಸೆರೆ ಹಿಡಿದಿತ್ತು. (ಏಜೆನ್ಸೀಸ್)