More

    ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ: ಭಾರತದ ಪರ ಬ್ಯಾಟ್​ ಬೀಸಿದ ರಷ್ಯಾ ವಿದೇಶಾಂಗ ಸಚಿವ

    ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ(ಯುಎನ್​ಎಸ್​ಸಿ) ಖಾಯಂ ಸದಸ್ಯತ್ವಕ್ಕಾಗಿ ಬಹುಕಾಲದಿಂದ ಬೇಡಿಕೆ ಇಟ್ಟುಕೊಂಡು ಬಂದಿರುವ ಭಾರತದ ಪರ ರಷ್ಯಾ ವಿದೇಶಾಂಗ ಸಚಿವ ಲಾವ್ರೋವ್​ ಬ್ಯಾಟ್​ ಬೀಸಿದ್ದಾರೆ.

    ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಲಾವ್ರೋವ್​, ಭಾರತ ಖಂಡಿತವಾಗಿ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಿರಬೇಕೆಂಬುದನ್ನು ನಾವು ನಂಬಿದ್ದೇವೆ ಎಂದಿದ್ದಾರೆ.

    ಆರ್ಥಿಕ ಶಕ್ತಿಯ ಹೊಸ ಕೇಂದ್ರ, ಹಣಕಾಸು ಸುಸ್ಥಿತಿ ಮತ್ತು ರಾಜಕೀಯ ಪ್ರಭಾವವೆಂಬ ವಸ್ತುನಿಷ್ಠ ಪ್ರಕ್ರಿಯೆಗಳು ಜಾಗತಿಕ ಅಭಿವೃದ್ಧಿ ಟ್ರೆಂಡ್​ನಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಅವುಗಳಲ್ಲಿ ಭಾರತವು ಒಂದಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದರು.

    ಇದೇ ವೇಳೆ ಭಾರತಕ್ಕೆ ಖಾಯಂ ಸದಸ್ಯತ್ವ ನೀಡಲು ಬೆಂಬಲ ನೀಡುವುದಾಗಿ ಲಾವ್ರೋವ್​ ಘೋಷಿಸಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts