ಅಗರ್ತಲ: ಎರಡು ವರ್ಷಗಳ ಬಳಿಕ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಬಸ್ ಸಂಚಾರ ಆರಂಭವಾಗಿದೆ. ಶುಕ್ರವಾರ ಈ ಬಸ್ಗೆ ಹಸಿರು ನಿಶಾನೆ ತೋರಲಾಗಿದೆ.
1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದೊಂದಿಗೆ ಸಂಪರ್ಕ ಹೊಂದಿರುವ ತ್ರಿಪುರಾ ರಾಜಧಾನಿ ಅಗರ್ತಲದ ಅಂತಾರಾಷ್ಟ್ರೀಯ ಗಡಿಯಿಂದ ಈ ಬಸ್ ಸಂಚಾರ ಆರಂಭಗೊಂಡಿದೆ.
ಅಗರ್ತಲ-ಢಾಕಾ-ಕೋಲ್ಕತ್ತಾ ‘ಮೈತ್ರಿ’ ಬಸ್ ಎರಡು ವರ್ಷಗಳ ನಂತರ ಅಗರ್ತಲ ನಗರದ ಹೊರವಲಯದಲ್ಲಿರುವ ಅಖೌರಾ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ (ICP) ನಿಂದ ತನ್ನ ಸೇವೆಯನ್ನು ಪುನರಾರಂಭಿಸಿದೆ.
ತ್ರಿಪುರಾ ಮತ್ತು ಬಾಂಗ್ಲಾದೇಶ ನಡುವೆ ಸಂಪರ್ಕ ಕಲ್ಪಿಸುವ ಈ ಬಸ್ 40 ಆಸನ ಹೊಂದಿದೆ. ಸದ್ಯ ಬಾಂಗ್ಲಾದೇಶಕ್ಕೆ ಈಗಾಗಲೇ 15 ರೈಲು ಸಂಚರಿಸುತ್ತಿದೆ. (ಏಜೆನ್ಸೀಸ್)