More

    ಶ್ರೀ ಹೊನ್ನಾಳಮ್ಮ ದೇವಾಲಯ ಉದ್ಘಾಟನೆ

    ಅರಕಲಗೂಡು: ಹೊಳೆನರಸೀಪುರ ತಾಲೂಕಿನ ಅಣ್ಣೇಚಾಕನಹಳ್ಳಿ ಶುಕ್ರವಾರ ಗ್ರಾಮದೇವತೆ ಶ್ರೀ ಹೊನ್ನಾಳಮ್ಮ ದೇವಸ್ಥಾನ ಉದ್ಘಾಟನೆಯು ಧಾರ್ಮಿಕ ವಿಧಾನಗಳನ್ವಯ ಸಂಭ್ರಮದಿಂದ ನೆರವೇರಿತು.

    ಗ್ರಾಮದಲ್ಲಿ ಎರಡು ದಿನಗಳಿಂದ ಹಬ್ಬದ ವಾತಾವರಣ ಮನೆ ಮಾಡಿತ್ತು. ಗುರುವಾರ ಸಂಜೆ ಗೋಧೂಳಿ ಲಗ್ನದಲ್ಲಿ ಗೋ ಪೂಜೆ, ಗಂಗಾಪೂಜೆ, ತೀರ್ಥ ಸಂಗ್ರಹಣೆ, ದೀಪಾರಾಧನೆ, ಮಹಾ ಸಂಕಲ್ಪ, ಅಂಕುರಾರ್ಪಣ, ವಾಸ್ತು ಕಳಸ ಪ್ರತಿಷ್ಠಾಪನೆ, ಕಳಸಾರಾಧನೆ, ವಾಸ್ತು ಹೋಮ, ಪ್ರಾಣ ಪ್ರತಿಷ್ಠಾಪನೆ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ವಿಧಿವತ್ತಾಗಿ ಸಾಗಿದವು.

    ಶುಕ್ರವಾರ ಬೆಳಗ್ಗೆ ನಿವೃತ್ತ ಐಎಎಸ್ ಅಧಿಕಾರಿ ಎಸ್.ಪುಟ್ಟಸ್ವಾಮಿ ಅವರ ಸಮ್ಮುಖದಲ್ಲಿ ಭಕ್ತರು ದೇವಸ್ಥಾನ ಮುಂಭಾಗದ ಗರುಡಗಂಬಕ್ಕೆ ಪೂಜಾ ವಿಧಾನಗಳನ್ನು ಪೂರೈಸಿದ ಬಳಿಕ ಮಹಾ ಪುಣ್ಯ ಹೋಮ ಧಾರ್ಮಿಕ ಕಾರ್ಯಗಳು ಜರುಗಿದವು. ವಿಮಾನಗೋಪುರ ಕಳಸ ಪ್ರತಿಷ್ಠಾಪನೆ, ಪಂಚಾಮೃತ ಅಭಿಷೇಕ, ದುರ್ಗಹೋಮ, ಶಾಂತಿ ಹೋಮ, ಪೂರ್ಣಾಹುತಿ, ಕುಂಭಾಭಿಷೇಕ, ವಿಶೇಷ ಅಲಂಕಾರ, ಅಷ್ಟೋತ್ತರ ಅರ್ಚನೆ ಮಹಾ ಮಂಗಳಾರತಿ ನಡೆದವು.

    ಕೆ.ಆರ್.ನಗರ ಕನಕ ಗುರುಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಹಿರೀಸಾವೆ ಅವಧೂತ ಶ್ರೀ ಗುರುಮೂರ್ತಿ ಸ್ವಾಮೀಜಿ, ವಿವಿಧ ಗಣ್ಯರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಭಕ್ತರಿಗೆ ಸಾಮೂಹಿಕವಾಗಿ ಅನ್ನ ದಾಸೋಹ ವ್ಯವಸ್ಥೆ ಏರ್ಪಡಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts