More

    ಬಸ್ ನಿಲ್ದಾಣದ ಹಮಾಲರಿಗೆ ಸತ್ಕಾರ

    ಇಳಕಲ್ಲ(ಗ್ರಾ): ಇಲ್ಲಿಯ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕಿಸಾನ್ ಮಜ್ದೂರ ಘಟಕದ ಪರವಾಗಿ ಬಸ್ ನಿಲ್ದಾಣದ ಹಮಾಲರನ್ನು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಶುಕ್ರವಾರ ಸನ್ಮಾನಿಸಿದರು.

    ಮಲೀಕಸಾಬ ದನ್ನೂರ, ಮಹಮ್ಮದಸಾಬ ನಾಯಕ, ನೀಲಪ್ಪ ಕುಂಬಾರ, ಮಲ್ಲಪ್ಪ ಕುಂಬಾರ, ಬಸಪ್ಪ ಕುಂಬಾರ, ಪರಸಪ್ಪ ಬೆಳಗಲ್ಲ ಅವರನ್ನು ಶಾಲು ಹೊದಿಸಿ ಗೌರವಿಸಿ ನೆನಪಿನ ಕಾಣಿಕೆ ನೀಡಲಾಯಿತು.

    ಕಾಂಗ್ರೆಸ್ ಹುನಗುಂದ ಬ್ಲಾಕ್ ಸಮಿತಿ ಅಧ್ಯಕ್ಷ ಗಂಗಾಧರ ದೊಡ್ಡಮನಿ, ಹಿರಿಯರಾದ ಡಾ.ಸುಭಾಷ ಕಾಖಂಡಕಿ, ಶರಣಪ್ಪ ಆಮದಿಹಾಳ, ಹನುಮಂತಪ್ಪ ರಾಠೋಡ, ಅರುಣ ಬಿಜ್ಜಳ, ಹುನಗುಂದ ತಾಲೂಕು ಪಂಚಾಯತಿ ಅಧ್ಯಕ್ಷ ಅನೀಲ ನಾಡಗೌಡ, ಶ್ರೀನಿವಾಸ ಗುರಂ, ಸಿದ್ದಪ್ಪ ಮಾದರ, ಆಕಾಶ ದೊಡ್ಡಮನಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts