ಚಿಕ್ಕಬಳ್ಳಾಪುರ: ನಟ ಪುನೀತ್ ರಾಜ್ಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿ ಆಗಲಿ ಎಂದು ಕನ್ನಡ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಅಗಲಗುರ್ಕಿ ಚಲಪತಿ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿನ ಮೂರು ಪಕ್ಷಗಳು (ಬಿಜೆಪಿ-ಕಾಂಗ್ರೆಸ್-ಜೆಡಿಎಸ್) ಕನ್ನಡಿಗರ ಪರವಾಗಿಲ್ಲ. ನಾಡು ಉಳಿಯಬೇಕಾದರೆ ರಾಜ್ಕುಮಾರ್ ಪುತ್ರ ಪುನೀತ್ ರಾಜ್ಕುಮಾರ್ ಸಿಎಂ ಆಗಬೇಕು. ಕನ್ನಡಪರ ಹೋರಾಟಗಾರರಿಂದ ಪುನೀತ್ ಅವರಿಗೆ ಮನವಿ ಮಾಡುತ್ತೇವೆ ಎಂದರು.
ಪೊಲೀಸ್ ಠಾಣೆಯಿಂದ ಬಿಡುಗಡೆಯಾದ ನಂತರ ಅಗಲಗುರ್ಕಿ ಚಲಪತಿ ಮಾತನಾಡಿದರು. ಬೆಳಗ್ಗೆ ಚಲಪತಿರನ್ನು ಚಿಕ್ಕಬಳ್ಳಾಪುರ ನಗರ ಪೊಲೀಸರು ಬಂಧಿಸಿದ್ದರು. ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದತಿಗೆ ಆಗ್ರಹಿಸಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕತ್ತೆ-ಕುರಿಗಳ ಜತೆ ವಿಧಾನಸೌಧ ಮೆರವಣಿಗೆ ನಡೆಸಲು ಸಿದ್ಧತೆ ನಡೆಸಿದ್ದರು. ಆದರೆ, ಪ್ರತಿಭಟನೆ ನಡೆಸದಂತೆ ಬೆಳಗ್ಗೆ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ಮಗನ ನಿಶ್ಚಿತಾರ್ಥ ಮುಗಿಸಿ ಹೊಸ ಕಾರು ಖರೀದಿಸಿ ಖುಷಿಯಿಂದಲೇ ಮನೆಗೆ ಹೊರಟವರು ಸೇರಿದ್ದು ಮಸಣಕ್ಕೆ!
ಬಂಧನದಿಂದ ಬಿಡುಗಡೆಯಾಗಿ ಸಿಎಂ ಯಡಿಯೂರಪ್ಪ, ಬಸವನಗೌಡ ಯತ್ನಾಳ್ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವಿರುದ್ದ ಆಕ್ರೋಶ ಹೊರಹಾಕಿದರು. (ದಿಗ್ವಿಜಯ ನ್ಯೂಸ್)
ರಾಜ್ಯದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿಯಾಗುತ್ತಾ? ಸರ್ಕಾರ ಏನು ಹೇಳುತ್ತೆ?