More

    ಆರ್ಟಿಕಲ್​ 371 ಹಿಂಪಡೆಯದೇ ಇದ್ದಿದ್ದರೆ ಕಾಶ್ಮೀರಕ್ಕೂ ಅಫ್ಘಾನಿಸ್ತಾನಕ್ಕೆ ಆದ ಸ್ಥಿತಿಯೇ ಆಗುತ್ತಿತ್ತು: ಬಿ.ವೈ. ರಾಘವೇಂದ್ರ

    ಶಿವಮೊಗ್ಗ: ಅಫ್ಘಾನಿಸ್ತಾನದಲ್ಲಿನ ಗಲಭೆ, ಹಿಂಸಾಚಾರಗಳ ಕುರಿತು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಪ್ರತಿಕ್ರಿಯಿಸಿದ್ದು, ಆರ್ಟಿಕಲ್ 371 ಹಿಂಪಡೆಯದೇ ಇದ್ದಿದ್ದರೆ ಕಾಶ್ಮೀರಕ್ಕೂ ಅಫ್ಘಾನಿಸ್ತಾನಕ್ಕೆ ಆದ ಪರಿಸ್ಥಿತಿಯೇ ಆಗುತ್ತಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಕಾಶ್ಮೀರದ ಆರ್ಟಿಕಲ್ 371 ಹಿಂಪಡೆಯಬೇಕು ಎಂಬುದು ನಮ್ಮ‌ ಬಹು ಹಿಂದಿನ ಕನಸಾಗಿತ್ತು. ಅದು ನನಸಾಗಿದ್ದರಿಂದ ಕಾಶ್ಮೀರ ಇಂದು ಕ್ಷೇಮವಾಗಿದೆ. ಒಂದುವೇಳೆ ಈಗಾಗಲೇ ಅದನ್ನು ಹಿಂಪಡೆಯದೇ ಇದ್ದಿದ್ದರೆ ಅಫ್ಘಾನಿಸ್ತಾನದಲ್ಲಿ ಆಗಿರುವಂಥದ್ದೇ ಅಲ್ಲಿಯೂ ಆಗಿರುತ್ತಿತ್ತು ಎಂದು ಹೇಳಿದ್ದಾರೆ.

    ಅಫ್ಘಾನಿಸ್ತಾನದಲ್ಲಿ ಜನರು ಜೀವ ಉಳಿಸಿಕೊಳ್ಳಲು ವಿಮಾನದ ರೆಕ್ಕೆ ಮೇಲೆ ಕುಳಿತು ಬೇರೆಡೆಗೆ ತೆರಳಲು ಯತ್ನಿಸುತ್ತಿರುವ ವೀಡಿಯೋ ನಾವೆಲ್ಲ ನೋಡಿದ್ದೇವೆ. ಅಂಥ ಒಂದು ಭಯಾನಕ ಸ್ಥಿತಿ ಕಾಶ್ಮೀರಲ್ಲಿ ಸಂಭವಿಸುವುದು ತಪ್ಪಿಹೋಗಿದೆ ಎಂದು ರಾಘವೇಂದ್ರ ಹೇಳಿದ್ದಾರೆ.

    ಮದ್ವೆಯಾಗಿ 8 ವರ್ಷಗಳಾದ್ರೂ ಮಕ್ಕಳಾಗಿಲ್ಲ ಎಂದು ವಿಷ ಕುಡಿದ ಮಹಿಳೆ; 2 ದಿನ ಆಸ್ಪತ್ರೆಯಲ್ಲಿ ಒದ್ದಾಡಿ ಸಾವು…

    ಕಾರು ಸಿಡಿದು ಛಿದ್ರ, ಹೊತ್ತಿ ಉರಿದ ವಾಹನ; ಸುಟ್ಟು ಕರಕಲಾದ ದೇಹ: ಜಿಲೆಟಿನ್​ ಸ್ಫೋಟ ಶಂಕೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts