More

    ಭ್ರಷ್ಟಾಚಾರದ ಆರೋಪದಲ್ಲಿ ಬಂಧಿತ ಐಎಎಸ್ ಅಧಿಕಾರಿಯ ಪುತ್ರ ಗುಂಡಿಟ್ಟುಕೊಂಡು ಆತ್ಮಹತ್ಯೆ!

    ಪಂಜಾಬ್​: ಭ್ರಷ್ಟಾಚಾರ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಐಎಎಸ್​ ಅಧಿಕಾರಿಯೊಬ್ಬರ ಪುತ್ರ, ಮನೆಯಲ್ಲಿ ಅಧಿಕಾರಿಗಳಿಂದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರು ಪ್ರಕರಣ ನಡೆದಿದೆ.

    ಭ್ರಷ್ಟಾಚಾರ ಆರೋಪದ ಮೇರೆಗೆ ಜೂ. 20ರಂದು ಬಂಧಿಸಲ್ಪಟ್ಟಿರುವ ಐಎಎಸ್ ಅಧಿಕಾರಿ ಸಂಜಯ್​ ಪೋಪ್ಲಿ ಮನೆಯಲ್ಲಿ ಈ ಘಟನೆ ನಡೆದಿದೆ. ಆರೋಪಿ ಅಧಿಕಾರಿಯನ್ನು ಪಂಜಾಬ್ ವಿಚಕ್ಷಣಾ ದಳದ ಅಧಿಕಾರಿಗಳು ಇಂದು ತನಿಖೆಗಾಗಿ ಮನೆಗೆ ಕರೆತಂದಿದ್ದರು. ಈ ಸಂದರ್ಭದಲ್ಲಿ ಮೊದಲ ಮಹಡಿಗೆ ಹೋದ ಪುತ್ರ, ಕಾನೂನು ವಿದ್ಯಾರ್ಥಿ ಕಾರ್ತಿಕ್ ಪೋಪ್ಲಿ (26) ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಧ್ಯಾಹ್ನ 1.30ರ ಸುಮಾರಿಗೆ ಈ ಪ್ರಕರಣ ನಡೆದಿತ್ತು. ಈತನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಮಾರ್ಗಮಧ್ಯೆ ಸಾವಿಗೀಡಾಗಿದ್ದಾನೆ.

    ಪ್ರಾಥಮಿಕ ತನಿಖೆ ಪ್ರಕಾರ ಇದು ಆತ್ಮಹತ್ಯೆ ಎನ್ನಲಾಗಿದೆ ಎಂದು ಚಂಡೀಗಢ ಪೊಲೀಸರು ತಿಳಿಸಿದ್ದಾರೆ. ಆದರೆ ಐಎಎಸ್​ ಅಧಿಕಾರಿಯ ಮನೆಯವರು ಪಂಜಾಬ್​ ವಿಚಕ್ಷಣಾ ದಳದವರ ಕಿರುಕುಳದಿಂದಾಗಿ ಮಗ ಸಾವಿಗೀಡಾಗಿದ್ದಾನೆ ಎಂದು ಆರೋಪಿಸಿದ್ದಾರೆ.

    ಪಂಜಾಬ್​ ಸರ್ಕಾರದ ಪಿಂಚಣಿ ವಿಭಾಗದಲ್ಲಿ ನಿರ್ದೇಶಕರಾಗಿದ್ದ ಸಂಜಯ್ ಪೋಪ್ಲಿ ವಿರುದ್ಧ ಗುತ್ತಿಗೆದಾರ ಸಂಜಯ್ ಕುಮಾರ್ ಎಂಬವರು ನೀಡಿದ್ದ ದೂರಿನ ಮೇರೆಗೆ ವಿಚಕ್ಷಣಾ ದಳದವರು ದಾಳಿ ನಡೆಸಿದ್ದರು. ಸಂಜಯ್ ಪೋಪ್ಲಿ ಮನೆಯಲ್ಲಿ ಚಿನ್ನದ ಗಟ್ಟಿ, ನಗದು ಸೇರಿ ಭಾರಿ ಸಂಪತ್ತು ಪತ್ತೆಯಾಗಿದೆ.

    ಕಾರಿನ ಗಾಜನ್ನು ಒರೆಸುತ್ತ ಫಾಸ್ಟ್ಯಾಗ್ ಹಣ ಕಬಳಿಸುವವರ ಹಾವಳಿ?; ಹೊರಬಿತ್ತು ಅಸಲಿಯತ್ತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts