More

    ಸೋಲಿನ ಹೊಣೆ ನಾನೇ ಹೊರುತ್ತೇನೆ

    ಗಜೇಂದ್ರಗಡ: ರೋಣ ಮತಕ್ಷೇತ್ರದ ಜನಾದೇಶವನ್ನು ಗೌರವಿಸುವುದರ ಜತೆಗೆ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಮಾಜಿ ಶಾಸಕ ಕಳಕಪ್ಪ ಬಂಡಿ ಹೇಳಿದರು.
    ವಿಧಾನಸಭಾ ಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಬಂಡಿ ಅವರ ಗೃಹ ಕಚೇರಿ ಆವರಣದಲ್ಲಿ ಬಿಜೆಪಿ ರೋಣ ಮಂಡಲದಿಂದ ಸೋಮವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

    2013ರಲ್ಲಿ ಬಿಜೆಪಿ ಒಡೆದಿತ್ತು. ಜಿಲ್ಲೆಯಲ್ಲಿ ಅಂದು ಪಕ್ಷದ ಕಚೇರಿಯೂ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಕಾರ್ಯಕರ್ತರ ಜತೆಗೂಡಿ 6 ತಿಂಗಳಲ್ಲಿ ಎದುರಾದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೆವು.

    ಆದರೆ, ಇಂದು ಪಕ್ಷ ಸಂಘಟನೆ ಬಲಾಢ್ಯವಾಗಿದ್ದು ಪ್ರತಿ ಗ್ರಾಮಗಳಲ್ಲಿ ಸಂಚರಿಸಿ ಪಕ್ಷ ಸಂಘಟನೆ ಮಾಡುತ್ತೇನೆ. ನಿಮ್ಮಂತಹ ಕಾರ್ಯಕರ್ತರು, ನಾಯಕರನ್ನು ಪಡೆದಿರುವುದು ನನ್ನ ಜೀವನದ ಭಾಗ್ಯ.

    ಕಾಂಗ್ರೆಸ್ ಜನತೆಗೆ ನೀಡಿದ ಗ್ಯಾರಂಟಿಗಳನ್ನು ಒಂದು ತಿಂಗಳಲ್ಲಿ ಈಡೇರಿಸದಿದ್ದರೆ ಕಾಂಗ್ರೆಸ್ ವಿರುದ್ಧ ಪ್ರತಿಭಟನೆಗೆ ಮುಂದಾಗೋಣ. ಏನೇ ಬಂದರು ನಿಮ್ಮೊಂದಿಗೆ ನಾನಿರುತ್ತೇನೆ, ಮತ್ತೇ ಗೆಲ್ಲೋಣ ಎಂದು ಹೇಳಿದರು.

    ಬಿ.ಎಂ. ಸಜ್ಜನ, ಜಿಪಂ ಮಾಜಿ ಅಧ್ಯಕ್ಷ ನಿಂಗಪ್ಪ ಕೆಂಗಾರ, ಅಶೋಕ ನವಲಗುಂದ ಮಾತನಾಡಿ, ಸುಳ್ಳಿನ ಸರಮಾಲೆಯನ್ನು ಮತದಾರರ ಕೊರಳಿಗೆ ಹಾಕಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದು ದೂರಿದರು.

    ಪುರಸಭೆ ಅಧ್ಯಕ್ಷ ವೀರಪ್ಪ ಪಟ್ಟಣಶೆಟ್ಟಿ, ಮುತ್ತಣ್ಣ ಕಡಗದ, ಬಿ.ಎಂ. ಸಜ್ಜನರ, ಶಿವಾನಂದ ಮಠದ, ಬಸವರಾಜ ಬೆಲ್ಲದ, ಅಶೋಕ ವನ್ನಾಲ, ಮುದಿಯಪ್ಪ ಕರಡಿ, ಉಮೇಶ ಮಲ್ಲಾಪುರ, ಭಾಸ್ಕರ ರಾಯಬಾಗಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts