ಹೈದರಾಬಾದ್: ಸಾಯಿ ಪಲ್ಲವಿ ದಕ್ಷಿಣ ಭಾರತದ ಪ್ರಸಿದ್ಧ ನಟಿ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಈಕೆಗೆ ತೆಲುಗು, ತಮಿಳು, ಕನ್ನಡ ಸೇರಿದಂತೆ ಮಲಯಾಳಂನಲ್ಲಿ ಅಪಾರ ಅಭಿಮಾನಿಗಳು ಇದ್ದಾರೆ. ‘ಪ್ರೇಮಂ’ ಸಿನಿಮಾ ನೋಡಿದವರೆಲ್ಲರೂ ಸಾಯಿ ಪಲ್ಲವಿ ಅಭಿನಯ ಕಂಡು ಥ್ರಿಲ್ ಆಗಿದ್ದರು.
ಇದನ್ನೂ ಓದಿ:300 ಪ್ರಪೋಸಲ್ ರಿಜೆಕ್ಟ್ ಮಾಡಿದ್ದಾರಂತೆ ಕನ್ನಡದ ನಟಿ! ಈ ಮಾತು ಕೇಳಿ ಕಿಚ್ಚ ಸುದೀಪ್ ಹೇಳಿದ್ದೇನು ಗೊತ್ತಾ ?
2015ರಲ್ಲಿ ತೆರೆಕಂಡ ‘ಪ್ರೇಮಂ’ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆಯನ್ನೇ ಬರೆಯಿತು. ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಮಾಯಿ ಮಾಡಿತು. ಮಲರ್ ಪಾತ್ರದ ಮಾಡಿದ್ದ ಸಾಯಿ ಪಲ್ಲವಿಗಂತೂ ದಕ್ಷಿಣ ಭಾರತದಲ್ಲೇ ಭಾರಿ ಬೇಡಿಕೆ ಸೃಷ್ಟಿಯಾಯಿತು.
ಆದಿಪುರುಷ’ ವಿವಾದದ ನಂತರ ಕಳೆದ ವರ್ಷ ನಿರ್ದೇಶಕ ನಿತೇಶ್ ತಿವಾರಿ ಅವರು ‘ರಾಮಾಯಣ’ ಚಿತ್ರವನ್ನು ಘೋಷಿಸಿದ್ದರು. ಅಂದಿನಿಂದ, ನಿತೇಶ್ ತಿವಾರಿ ಅವರ ‘ರಾಮಾಯಣ’ ಕಾಸ್ಟಿಂಗ್ಗೆ ಸಂಬಂಧಿಸಿದಂತೆ ವರದಿಗಳ ಪ್ರಕಾರ, ಚಿತ್ರದಲ್ಲಿ ರಣಬೀರ್ ಕಪೂರ್ ಭಗವಾನ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ಜಾನಕಿ ಪಾತ್ರಕ್ಕೆ ದಕ್ಷಿಣದ ನಟಿ ಸಾಯಿ ಪಲ್ಲವಿ ಆಯ್ಕೆಯಾಗಿದ್ದಾರೆ ಎನ್ನಲಾಗಿತ್ತು. ಆದರೆ ಈಗ ರಾಮಾಯಣದಿಂದ ಸಾಯಿ ಪಲ್ಲವಿ ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ಹೊಸ ನಟಿ ಬರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ವರದಿಯ ಪ್ರಕಾರ, ನಿತೇಶ್ ತಿವಾರಿ ಅವರ ‘ರಾಮಾಯಣ’ದಲ್ಲಿ ಸಾಯಿ ಪಲ್ಲವಿ ಬದಲಿಗೆ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ನಟಿಸಲಿದ್ದಾರೆ ಎನ್ನಲಾಗ್ತಿದೆ.
ವಿಶೇಷ ನೃತ್ಯ ಅಥವಾ ಐಟಂ ಹಾಡುಗಳು, ಐಟಂ ನೃತ್ಯ ಸಿನೆಮಾದ ಒಂದು ಪ್ರಮುಖ ಭಾಗವಾಗಿದೆ. ಐಟಂ ಹಾಡುಗಳು ಯಾವುದೇ ಚಲನಚಿತ್ರದ ಪ್ರಚಾರ ಮತ್ತು ಮಾರುಕಟ್ಟೆ ಪ್ರಚಾರದ ದೊಡ್ಡ ಭಾಗವಾಗಿದೆ. ಈ ಹಾಡಿನ ನೃತ್ಯದಲ್ಲಿ ಹೆಚ್ಚಾಗಿ ಈಗ ದೊಡ್ಡ ಹೆಸರು ಮಾಡಿದ ನಟಿಯರು ತಮ್ಮ ಸೊಂಟ ಬಳಕಿಸುತ್ತಾರೆ.
ಇದು ಚಲನಚಿತ್ರಕ್ಕೆ ದೊಡ್ಡ ಆಕರ್ಷಣೆಯಾಗಿ ಬಿಂಬಿಸಲಾಗಿದೆ. ಸ್ವಾಭಾವಿಕವಾಗಿ, ಅವುಗಳಲ್ಲಿ ಕಾಣಿಸಿಕೊಳ್ಳುವ ನೃತ್ಯಗಾರರು, ನಟಿಯರು ಹಾಟ್ ಆಗಿಯೇ ಕಾಣಿಸುತ್ತಾರೆ. ಐಟಂ ಸಾಂಗ್ ಮಾಡುವ ನಟಿಯರಿಗೆ ಸದ್ಯಕ್ಕೆ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಕೊಡುತ್ತಾರೆ.
ಎಷ್ಟೇ ಹಣ ನೀಡಿದರೂ ಐಟಂ ಸಾಂಗ್ಗಳನ್ನು ಮಾಡುವುದಿಲ್ಲ. ಹಾಗಾಗಿಯೇ ಸಾಯಿ ಪಲ್ಲವಿಯನ್ನು ಎಲ್ಲರೂ ಇಷ್ಟಪಡುತ್ತಾರೆ. ಈ ಹಿನ್ನೆಲೆಯಲ್ಲಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮತ್ತೊಮ್ಮೆ ಐಟಂ ಸಾಂಗ್ಗಳ ಪ್ರಸ್ತಾಪದ ಬಗ್ಗೆ ಮಾತನಾಡಿದ್ದಾರೆ ಸಾಯಿ ಪಲ್ಲವಿ. ಸಂದರ್ಶನದಲ್ಲಿ ಸಾಯಿ ಪಲ್ಲವಿ “ಐಟಂ ಸಾಂಗ್ಸ್ ನನಗೆ ಕಂಫರ್ಟಬಲ್ ಅಲ್ಲ” ಎಂದಿದ್ದಾರೆ. ಮುಂದೆಯೂ ಆಫರ್ ಬಂದರೂ ನಾನು ಅದಕ್ಕೆ ಒಪ್ಪುವುದಿಲ್ಲ ಎಂದಿದ್ದಾರೆ. ಏಕೆಂದರೆ ಡ್ರೆಸ್ಸಿಂಗ್ ಸರಿಯಾಗಿಲ್ಲದಿದ್ದರೆ ನನಗೆ ಇಷ್ಟವಾಗುವುದಿಲ್ಲ, ಅದನ್ನು ನನ್ನ ಅಭಿಮಾನಿಗಳು ಒಪ್ಪುವುದಿಲ್ಲ ಎಂದಿದ್ದಾರೆ.
ವಿವಾದದ ನಡುವೆ ಮತ್ತೆರಡು ಫೋಟೊ ಹಂಚಿಕೊಂಡ ಪವಿತ್ರಾಗೌಡ! ನಟ ದರ್ಶನ್ ಫ್ಯಾನ್ಸ್ ಹೇಳಿದ್ದೇನು?