ನವದೆಹಲಿ: ಜವಾಹರ್ ಲಾಲ್ ವಿಶ್ವವಿದ್ಯಾಲಯಕ್ಕೆ ಭಾನುವಾರ ಸಂಜೆ ನುಗ್ಗಿದ ಮುಸುಕುಧಾರಿಗಳ ಗುಂಪು ನಡೆಸಿದ ಹಲ್ಲೆಯಲ್ಲಿ ಯೂನಿವರ್ಸಿಟಿಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಷೆ ಘೋಷ್ ತಲೆಗೆ ತೀವ್ರವಾಗಿ ಗಾಯವಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು.
ಇಂದು ಡಿಸ್ಚಾರ್ಜ್ ಆದ ಬಳಿಕ ಮಾತನಾಡಿದ ಐಷೆ ಘೋಷ್, ದಾಳಿಕೋರರಿಗೆ ನಾನೇ ನಿರ್ಧಿಷ್ಟ ಟಾರ್ಗೆಟ್ ಆಗಿದ್ದೆ. ನನ್ನ ಮೇಲೆ ಐರನ್ ರಾಡ್ಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ಯೂನಿವರ್ಸಿಟಿಯಲ್ಲಿ ನಡೆದ ಹಿಂಸಾಚಾರ ನಡೆಸಿದ್ದು ಆರ್ಎಸ್ಎಸ್-ಎಬಿವಿಪಿ ಸದಸ್ಯರೇ ಎಂದು ಪ್ರತಿಪಾದಿಸಿರುವ ಐಷೆ ಘೋಷ್, ನಾನು ಸ್ವಲ್ಪ ಚೇತರಿಸಿಕೊಂಡ ಕೂಡಲೇ ಪೊಲೀಸರಿಗೆ ಎಲ್ಲವನ್ನೂ ತಿಳಿಸುತ್ತೇನೆ. ನನ್ನ ಹೇಳಿಕೆಗಳನ್ನು ದಾಖಲಿಸುತ್ತೇನೆ. ಎಬಿವಿಪಿ ಸದಸ್ಯರ ವಿರುದ್ಧ ಎಫ್ಐಆರ್ ದಾಖಲಾಗಬೇಕು ಎಂದಿದ್ದಾರೆ.
ರಾಡ್ನಿಂದ ಹಲ್ಲೆ ನಡೆಸಿದ ಒಂದಷ್ಟು ಜನರು ಮುಖಕ್ಕೆ ಮುಸುಕು ಧರಿಸಿ ಇರಲಿಲ್ಲ. ನಾನು ಅವರನ್ನು ಗುರುತಿಸಬಲ್ಲೆ ಎಂದು ಹೇಳಿದ್ದಾರೆ.
ಭಾನುವಾರ ಮುಸುಕುಧಾರಿಗಳು ಕೋಲು, ರಾಡ್, ಕಲ್ಲುಗಳಿಂದ ನಡೆಸಿದ ದಾಳಿಗೆ ಸುಮಾರು ವಿದ್ಯಾರ್ಥಿಗಳು, ಉಪನ್ಯಾಸಕರು ಎಲ್ಲ ಸೇರಿ ಸುಮಾರು 34 ಮಂದಿ ಗಾಯಗೊಂಡಿದ್ದರು. ( ಏಜೆನ್ಸೀಸ್)