ಹಟ್ಟಿಚಿನ್ನದಗಣಿ: ನಿರಂತರ ಸುರಿದ ಮಳೆಗೆ ಸಮೀಪದ ಚಿಕ್ಕಹೆಸರೂರು ಗ್ರಾಮದ ಬಸಮ್ಮ ವೀರೇಶ್ ದೇಸಾಯಿ ಗುಂಡಸಾಗರ ಅವರ ಮನೆ ಗುರುವಾರ ರಾತ್ರಿ ಬಿದ್ದಿದೆ. ಇದರಿಂದ ಮನೆಯಲ್ಲಿರುವ ದಿನಸಿ, ಸಾಮಗ್ರಿ ಹಾಳಾಗಿವೆ. ತಾತ್ಕಾಲಿಕವಾಗಿ ಬಸಮ್ಮ ಅವರ ಕುಟುಂಬ ಬಾಡಿಗೆ ಮನೆ ಪಡೆದು ಸ್ಥಳಾಂತರಗೊಂಡಿದ್ದು, ಪರಿಹಾರಕ್ಕೆ ಒತ್ತಾಯಿಸಿದ್ದಾರೆ.