More

    ಹೆಂಡತಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಗಂಡ; ಎನ್​ಜಿಒನಿಂದಲೂ ಉಪಟಳ ಆರೋಪ

    ಬೆಂಗಳೂರು: ಪತಿಯಿಂದ ಪತ್ನಿಗೆ ಕಿರುಕುಳ ಆಗಿರುವ ಪ್ರಕರಣಗಳು ತೀರಾ ಸಾಮಾನ್ಯ. ಆದರೆ ಇಲ್ಲಿ ಪತ್ನಿಯಿಂದಲೇ ಪತಿ ಕಿರುಕುಳ ಅನುಭವಿಸಿದ್ದು, ಅದನ್ನು ತಾಳಲಾರದೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗಳೂರಿನ ಪಾದರಾಯನಪುರದಲ್ಲಿ ಈ ಘಟನೆ ನಡೆದಿದೆ.

    ಬೆಂಗಳೂರಿನ ರಾಯಪುರ ನಿವಾಸಿ ಮಹಮದ್ ಸಲ್ಮಾನ್​ ಖಾತ್ ಮೃತಪಟ್ಟವರು. ಸಲ್ಮಾನ್ ಕಳೆದೆರಡು ವರ್ಷಗಳ ಹಿಂದೆ ರೊಹಿನಾಜ್ ಎಂಬಾಕೆಯನ್ನು ಮದುವೆಯಾಗಿದ್ದು, ನಂತರ ಇಬ್ಬರ ಮಧ್ಯೆ ವಿರಸ ಮೂಡಿತ್ತು. ಹೆರಿಗೆಗೆಂದು ತಾಯಿ ಮನೆಗೆ ಹೋಗಿದ್ದ ಆಕೆ ಬರಲು ನಿರಾಕರಿಸುತ್ತಿದ್ದಳು.

    ಇದನ್ನೂ ಓದಿ: ಪ್ರಿಯಕರನನ್ನು ಹುಡುಕಿಕೊಂಡು ರಾತ್ರಿಯೇ ಆತನ ಮನೆಗೆ ಹೋದ ಪ್ರೇಯಸಿ; ಆ ನಂತರ ನಡೆದಿದ್ದಂತೂ ಬೆಚ್ಚಿಬೀಳಿಸುವಂಥದ್ದು!

    ಪತಿ ಮದ್ಯವ್ಯಸನಿಯಾಗಿದ್ದು ತಾನು ಆತನ ಮನಗೆ ಹೋಗುವುದಿಲ್ಲ ಎಂದು ಆಕೆ ಎರಿಕ್ ಹ್ಯೂಮನ್ ಆರ್ಗನೈಸೇಷನ್ ಎಂಬ ಎನ್​ಜಿಒಗೆ ದೂರು ನೀಡಿದ್ದಳು. ಮನೆಗೆ ಬರಬೇಕಿದ್ದರೆ 20 ಲಕ್ಷ ರೂಪಾಯಿ ಬಾಂಡ್ ಬರೆದುಕೊಡಬೇಕು ಎಂದು ಷರತ್ತು ವಿಧಿಸಿದ್ದಲ್ಲದೆ, ತಪ್ಪಿದರೆ ವಿಚ್ಛೇದನ ನೀಡುವಂತೆ ರೊಹಿನಾಜ್​ ಆಗ್ರಹಿಸಿದ್ದಳು ಎನ್ನಲಾಗಿದೆ. ಜತೆಗೆ ಎನ್​ಜಿಒನವರು ಕೂಡ 20 ಲಕ್ಷ ರೂ. ಬಾಂಡ್ ಬರೆದುಕೊಡುವಂತೆ ಪದೇಪದೆ ಕರೆ ಮಾಡುತ್ತಿದ್ದರು. ಹೀಗಾಗಿ ಸಲ್ಮಾನ್ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಜಗಜೀವನ್​ರಾಮ್​ ನಗರ​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇಲ್ಲಿ ಸೋಂಕಿತರಿಗೆ ನೀಡುತ್ತಿದ್ದಾರೆ ಅವಧಿ ಮುಗಿದ ಔಷಧ!; ಶಾಸಕರಿಂದ ತೀವ್ರ ಆಕ್ಷೇಪ

    ಶವಸಂಸ್ಕಾರಕ್ಕೆ ಏನೂ ಸಮಸ್ಯೆ ಇಲ್ಲ, ಸುಡಲಿಕ್ಕೆ 4 ಎಕರೆ ಜಾಗದಲ್ಲಿ ವ್ಯವಸ್ಥೆ ಮಾಡಿದ್ದೇವೆ: ಸಚಿವ ವಿ. ಸೋಮಣ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts