More

    ಸಾವಿನಲ್ಲೂ ಒಂದಾದ ದಂಪತಿ

    ಕಾರವಾರ:ಹಲವು ದಶಕಗಳ ಸಾರ್ಥಕ ದಾಂಪತ್ಯ ಜೀವನ ನಡೆಸಿದ ಪತಿ, ಪತ್ನಿ ಇಬ್ಬರೂ ಸಾವಿನಲ್ಲೂ ಜತೆಯಾದ ಅಪರೂಪದ ಘಟನೆ ಹೊನ್ನಾವರ ತಾಲೂಕಿನ ತಲಗೋಡಿನಲ್ಲಿ ನಡೆದಿದೆ.
    ತಲಗೋಡು ನಾಗ ಚಾಮುಂಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಸುರೇಶ ಸುಬ್ರಾಯ ಮಹಾಲೆ(80) ಹಾಗೂ ಅವರ ಪತ್ನಿ ವಿಜಯಾ ಮಹಾಲೆ(71)ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನ ಹೊಂದಿದರು. ಸ್ವ ಗ್ರಾಮದಲ್ಲಿ ಇಬ್ಬರ ಅಂತ್ಯಸAಸ್ಕಾರವನ್ನು ಒಟ್ಟಿಗೇ ನಡೆಸಲಾಯಿತು.
    ವಿಜಯಾ ಸುರೇಶ ಮಹಾಲೆ ಅವರು ಅನಾರೋಗ್ಯಕ್ಕೊಳಗಾಗಿ ಎರಡು ವಾರಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಎರಡು ದಿನಗಳ ಹಿಂದೆ ಪತಿ ಸುರೇಶ ಮಹಾಲೆ ಅವರ ಜ್ವರದಿಂದ ಬಳಲಿ ಅದೇ ಆಸ್ಪತ್ರೆಗೆ ದಾಖಲಾಗಿದ್ದರು. ಮೊದಲು ಸುರೇಶ ಮಹಾಲೆ ನಿಧನರಾದರು. ನಂತರ ಆ ಸುದ್ದಿ ಕೇಳುತ್ತಿದ್ದಂತೆ ಪತ್ನಿ ವಿಜಯಾ ಸಹ ಮೃತರಾದರು ಎಂದು ಸಂಬAಽಕರು ತಿಳಿಸಿದ್ದಾರೆ.
    ಸುರೇಶ ಮಹಾಲೆ ಅವರು ದರ್ಶನ ಪಾತ್ರಿಯಾಗಿದ್ದು, ಹಲವು ವರ್ಷಗಳಿಂದ ನಾಗ ಚೌಡೇಶ್ವರಿ ದೇಗುಲದಲ್ಲಿ ದರ್ಶನ ಕಾರ್ಯಕ್ರಮ ನಡೆಸುಕೊಡುತ್ತಿದ್ದರು. ಮೃತ ದಂಪತಿಗೆ ಇಬ್ಬರು ಪುತ್ರರಿದ್ದಾರೆ.

    ಇದನ್ನೂ ಓದಿ:ಮುಂಬೈನಲ್ಲಿ ಪತ್ತೆಯಾದ ಭಟ್ಕಳದ ವೈದ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts