More

    ಆರು ಗ್ರಾಪಂಗಳಲ್ಲಿ ಸ್ವತಂತ್ರ ಅಧಿಕಾರ

    ಹುನಗುಂದ: ಇಳಕಲ್ಲ ಮತ್ತು ಹುನಗುಂದ ಅವಳಿ ತಾಲೂಕಿನ 15 ಗ್ರಾಮ ಪಂಚಾಯಿತಿಗಳಲ್ಲಿ ನನ್ನ ಬೆಂಬಲಿಗರು ಅಧಿಕಾರ ಚುಕ್ಕಾಣಿ ಹಿಡಿಯುವಂತೆ ಕ್ಷೇತ್ರದ ಜನರು ಅಶೀರ್ವಾದ ಮಾಡಿದ್ದಾರೆ ಎಂದು ಎಸ್‌ಆರ್‌ಎನ್‌ಇ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ನವಲಿಹಿರೇಮಠ ಹೇಳಿದರು.

    ಪಟ್ಟಣದ ಬಸವ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಸ್‌ಆರ್‌ಎನ್‌ಇ ಫೌಂಡೇಷನ್ ಬೆಂಬಲಿತ ಗ್ರಾಪಂ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

    ಅವಳಿ ತಾಲೂಕಿನ 28 ಗ್ರಾಪಂಗಳ 447 ಸ್ಥಾನಗಳಿಗೆ 227 ಜನ ನನ್ನ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸಿ 88 ಜನರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಗುಡೂರ, ವಡಗೇರಿ, ಕಂದಗಲ್ಲ, ಹಿರೇಮಳಗಾವಿ, ಕರಡಿ ಸೇರಿ 6 ಗ್ರಾಪಂನಲ್ಲಿ ಸ್ವತಂತ್ರವಾಗಿ ಅಧಿಕಾರವನ್ನು ಹಿಡಿದಿದ್ದಾರೆ. 8 ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತರು, 1 ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲಿತರ ಜತೆಗೂಡಿ ಅಧಿಕಾರಕ್ಕೇರಿದ್ದಾರೆ ಎಂದು ಹೇಳಿದರು.

    ಮುಖಂಡರಾದ ಯಮನೂರ ತಳವಾರ, ವೀಣಾ ಹಳ್ಳಿಕಟ್ಟಿ, ಚೇತನ ಮುಕ್ಕಣ್ಣವರ, ಹರ್ಷದ್ ನಾಯ್ಕ, ಸಂಗಪ್ಪ ಹಡಪದ, ಮಲ್ಲಿಕಾರ್ಜುನ ಗಾಣಗೇರ, ಅಂಜಲಿ ವರಗೋಡದಿನ್ನಿ, ಗುರಣಗೌಡ ಪಾಟೀಲ, ಅಬ್ಬುಲ್ ರಜಾಕ್ ತಟಗಾರ, ಎಲ್.ಎನ್.ಪಾಟೀಲ, ವೀಣಾ ಅರಳಿಕಟ್ಟಿ, ಚೇತನ ಮುಕ್ಕಣ್ಣವರ, ಕಳಕಪ್ಪ ಮಂತ್ರಿ, ವಿ.ಬಿ.ದಮ್ಮೂರಮಠ, ಸಾಂತಯ್ಯ ಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts