ಹುಬ್ಬಳ್ಳಿ: ಶಾಲೆಗೆ ರಜೆ ಕೊಟ್ಟ ಕಾರಣ ಹುಬ್ಬಳ್ಳಿಯ ಶ್ರೀನಗರದಲ್ಲಿರುವ ಅಜ್ಜಿ ಮನೆಗೆ ಬಂದಿದ್ದ ಬಾಲಕ ನದೀಂ(8) ಕಳೆದ ಮಾರ್ಚ್ 30 ರಂದು ಕೊಲೆಯಾಗಿ ಹೋಗಿದ್ದ. ಅಜ್ಜಿ ಮನೆಯಿಂದ ನಾಪತ್ತೆಯಾಗಿದ್ದ ಬಾಲಕನ ಶವ ಅರೆ ಬೆತ್ತಲೆಯಾಗಿ ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದ ಬೆಂಡಿಗೇರಿ ಠಾಣಾ ಪೊಲೀಸರು, ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರವಿ ಬಳ್ಳಾರಿ ಎಂಬಾತ ಕೊಲೆ ಆರೋಪಿ. ಸದ್ಯ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕೊಲೆ ಕೊಲೆ ಮಾಡಲು ಕಾರಣ ಏನೆಂಬುದನ್ನು ಬಾಯ್ಬಿಟ್ಟಿದ್ದಾನೆ. ಆರೋಪಿ ರವಿಗೆ ಬಾಲಕ ನದೀಂ ಪರಿಚಯಸ್ಥನಾಗಿದ್ದ. ಬಾಲಕ 5 ರೂಪಾಯಿ ಕೊಡುವಂತೆ ರವಿ ಬಳಿ ಕೇಳಿಕೊಂಡಿದ್ದಾನೆ. ಈ ವೇಳೆ ರವಿ ಕೇಳಿದಷ್ಟು ಹಣ ಕೊಟ್ಟಿದ್ದಾನೆ. ಆದರೆ ಬಾಲಕ ಮತ್ತೆ 5 ರೂ. ಕೊಡುವಂತೆ ಕೇಳಿದ್ದಾನೆ.
ಇದನ್ನೂ ಓದಿ: ಬೇಟೆಗಾರನೇ ಬೇಟೆಯಾದಾಗ! ಐಎಫ್ಎಸ್ ಅಧಿಕಾರಿಯ ಪೋಸ್ಟ್ ವೈರಲ್…
ಬಾಲಕ ನದೀಂ ಎರಡನೇ ಬಾರಿಗೆ 5 ರೂ. ಕೇಳಿದಾಗ ರವಿ ಸಿಟ್ಟಾಗಿದ್ದಾನೆ. ಕೋಪದಲ್ಲಿ ರವಿ ಬಾಲಕ ನದೀಂ ಕೆನ್ನೆಗೆ ಹೊಡೆದಿದ್ದಾನೆ. ಇದರಿಂದ ಬಾಲಕ ಮೂರ್ಚೆ ಹೋಗಿದ್ದಾನೆ. ಮೂರ್ಚೆ ಹೋದಾಗ ಬಾಲಕನನ್ನು ಕರೆದುಕೊಂಡು ಹೋಗಿ ಪಾಳು ಬಿದ್ದ ಜಾಗದಲ್ಲಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ನಂತರ ಅನುಮಾನ ಬಾರದಂತೆ ಬಾಲಕನ ಬಟ್ಟೆ ಬಿಚ್ಚಿ ಹಂತಕ ರವಿ ಪರಾರಿಯಾಗಿದ್ದಾನೆ.
ಭೀಕರವಾಗಿ ಕೊಲೆಯಾಗಿದ್ದ ನದೀಂ ಮೃತದೇಹ ಪತ್ತೆಯಾಗುತ್ತಿದ್ದಂತೆ ಒಂದು ಕ್ಷಣ ಎಲ್ಲರೂ ಬೆಚ್ಚಿ ಬಿದ್ದಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯ ಪತ್ತೆಗೆ ತನಿಗೆ ಚುರುಕುಗೊಳಿಸಿದ್ದರು. ಇದೀಗ ಘಟನೆ ನಡೆದ 48 ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯ ಬಂಧನ ವಿಷಯ ತಿಳಿಯುತ್ತಲೇ ಬಾಲಕ ನದೀಂ ಕುಟುಂಬಸ್ಥರು ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದಾರೆ. ನಮ್ಮ ಮನೆ ಮಗನನ್ನ ಅಮಾನುಷವಾಗಿ ಹತ್ಯೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ಆಗಬೇಕೆಂದು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: VIDEO | ನೀತಾ ಅಂಬಾನಿಯ ನೃತ್ಯ ನೋಡಿ ಮನಸೋತ ಬಾಲಿವುಡ್ ಮಂದಿ!