More

    ನಗರಸಭೆ ಜೆಸಿಬಿಗಳ ಘರ್ಜನೆ:
    ಭೂ ಕಬಳಿಕೆದಾರರಲ್ಲಿ ನಡುಕ

    ಹೊಸಪೇಟೆ: ನಗರದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ನಗರಸಭೆ ಜೆಸಿಬಿಗಳು ಘರ್ಜಿಸುತ್ತಿವೆ. ಇಲ್ಲಿನ ಎಂ.ಪಿ.ಪ್ರಕಾಶ ನಗರದಲ್ಲಿ ನಿರ್ಮಣ ಹಂತದಲ್ಲಿರುವ ಅನಧಿಕೃತ ಕಟ್ಟಡ ತೆರವು ಕಾರ್ಯ ಆರಂಭಿಸಿದ್ದು, ಭೂ ಕಬಳಿಕೆದಾರರಿಗೆ ಬಿಸಿ ಮುಟ್ಟಿಸಿದೆ.
    ನಗರಸಭೆ ಪೌರಾಯುಕ್ತ ಮನೋಹರ್ ನೇತೃತ್ವದಲ್ಲಿ ಒಂದು ಇಟಾಚಿ, ಜೆಸಿಬಿಯೊಂದಿಗೆ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ, ಸಾರ್ವಜನಿಕ ರಸ್ತೆಯನ್ನು ಕಬಳಿಸಿ ನಿರ್ಮಿಸುತ್ತಿರುವ ಎರಡು ಅಂತಸ್ತಿನ ಮನೆಯನ್ನು ನೆಲಸಮಗೊಳಿಸುತ್ತಿದ್ದಾರೆ. ಸ್ಥಳದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
    ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗೆ ಕಬಳಿಕೆ ಮತ್ತು ಅನಧಿಕೃತ ಕಟ್ಟಡಗಳು ನಿಮಾರ್ಣದ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದವು. ಭೂ ಕಬಳಿಕೆ ಪ್ರಕರಣದಲ್ಲಿ ನಗರಸಭೆಯ ಕೆಲ ಸಿಬ್ಬಂದಿಗಳು ಅಮಾನತುಗೊಂಡಿದ್ದಾರೆ. ಈ ಎಲ್ಲ ಬೆಳವಣಿಗೆಳ ಬೆನ್ನಲ್ಲೇ ನಗರಸಭೆಯಿಂದ ಅಕ್ರಮ ಕಟ್ಟಡಗಳ ತೆರವು ಕಾರ್ಯಕ್ಕೆ ಚಾಲನೆ ನೀಡಿರುವುದು, ಭೂ ಕಬಳಿಕೆದಾರರಲ್ಲಿ ನಡುಕ ಸೃಷ್ಟಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts