More

    ಹೋರಿ ಸ್ಪರ್ಧೆ ನೋಡಲು ಹೋದಾಗ ಮೃತಪಟ್ಟ ಅಭಿಮಾನಿ; ರಾಣೆಬೆನ್ನೂರ ಕಾ ರಾಜಾ ಮಾಲೀಕರಿಂದ ಸಹಾಯಹಸ್ತ

    ರಾಣೆಬೆನ್ನೂರ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮೃತಪಟ್ಟ ಹೋರಿ ಅಭಿಮಾನಿಯ ಕುಟುಂಬಕ್ಕೆ ಇಲ್ಲಿಯ ರಾಣೆಬೆನ್ನೂರ ಕಾ ರಾಜಾ ಹೋರಿ ಮಾಲೀಕ ಪ್ರಕಾಶ ಬುರಡಿಕಟ್ಟಿ ಸಹಾಯಧನ ನೀಡುವ ಜತೆಗೆ ಅವರ ಮಗನ ವಿದ್ಯಾಭ್ಯಾಸದ ಜವಾಬ್ದಾರಿ ತೆಗೆದುಕೊಳ್ಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಹೋರಿ ಸ್ಪರ್ಧೆ ನೋಡಲು ಹೋದಾಗ ಮೃತಪಟ್ಟ ಅಭಿಮಾನಿ; ರಾಣೆಬೆನ್ನೂರ ಕಾ ರಾಜಾ ಮಾಲೀಕರಿಂದ ಸಹಾಯಹಸ್ತ

    ಬ್ಯಾಡಗಿ ತಾಲೂಕು ಮೋಟೆಬೆನ್ನೂರ ಗ್ರಾಮದ ಚಂದ್ರು ಆಡೂರ (25) ಎನ್ನುವ ಯುವಕ ಜ. 9ರಂದು ಮುಂಡಗೋಡ ತಾಲೂಕಿನ ಕೋಡಂಬಿಯಲ್ಲಿ ಹಮ್ಮಿಕೊಂಡಿದ್ದ ಹೋರಿ ಬೆದರಿಸುವ ಸ್ಪರ್ಧೆ ನೋಡಲು ತೆರಳಿದ್ದ. ಅಂದು ಹೋರಿಯೊಂದು ತಿವಿದು ಗಂಭೀರವಾಗಿ ಗಾಯಗೊಂಡಿದ್ದ ಚಂದ್ರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದನು.

    ಈತ ರಾಣೆಬೆನ್ನೂರ ಕಾ ರಾಜಾ ಹೋರಿಯ ಅಪ್ಪಟ ಅಭಿಮಾನಿ ಕೂಡ ಆಗಿದ್ದ. ರಾಣೆಬೆನ್ನೂರ ಕಾ ರಾಜಾ ಹೋರಿ ಎಲ್ಲಿಯೆ ಸ್ಪರ್ಧೆಯಲ್ಲಿ ಭಾಗವಹಿಸಿದರೆ ಅಲ್ಲಿ ಹೋರಿ ಓಟ ನೋಡಲು ತಪ್ಪದೆ ತೆರಳುತ್ತಿದ್ದ. ಈ ಹಿನ್ನೆಲೆಯಲ್ಲಿ ಆತನ ಮನೆಗೆ ಭೇಟಿ ನೀಡಿ ಪ್ರಕಾಶ ಬುರಡಿಕಟ್ಟಿ ಕುಟುಂಬದವರಿಗೆ ಸಾಂತ್ವನ ಹೇಳಿ ಸಹಾಯಧನ ನೀಡಿದ್ದಾರೆ.

    ಮೃತನಿಗೆ ಒಂದುವರೆ ವರ್ಷದ ಗಂಡು ಮಗುವಿದ್ದು, ಮುಂದಿನ ದಿನದಲ್ಲಿ ಆ ಮಗುವಿನ ಓದುವ ಸಂಪೂರ್ಣ ಖರ್ಚನ್ನು ತಾವೇ ಭರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಮೃತನ ಕುಟುಂಬದವರು ‘ವಿಜಯವಾಣಿ’ಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts