More

    ಮೂಡಿಗೆರೆ ಹ್ಯಾಂಡ್​ಪೋಸ್ಟ್ ವೃತ್ತಕ್ಕೆ ತೇಜಸ್ವಿ ಹೆಸರಿಡಿ

    ಬಣಕಲ್: ಮೂಡಿಗೆರೆ ಹ್ಯಾಂಡ್​ಪೋಸ್ಟ್ ವೃತ್ತಕ್ಕೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಹೆಸರಿಡಬೇಕು ಎಂದು ಕಸಾಪ ತಾಲೂಕು ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಒತ್ತಾಯಿಸಿದರು.

    ತೇಜಸ್ವಿ ಜನ್ಮದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ರಕ್ತದಾನ ಶಿಬಿರ ಮತ್ತು ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೂಡಿಗೆರೆ ಹ್ಯಾಂಡ್​ಪೋಸ್ಟ್ ಎಂದಾಕ್ಷಣ ತೇಜಸ್ವಿ ಅವರ ಹೆಸರು ನೆನಪಿಗೆ ಬರುತ್ತದೆ. ತೇಜಸ್ವಿ ಬದುಕಿ ಬಾಳಿದ ಹ್ಯಾಂಡ್​ಪೋಸ್ಟ್ ವೃತ್ತಕ್ಕೆ ತೇಜಸ್ವಿ ಹೆಸರಿಡುವುದು ಸೂಕ್ತ ಎಂದು ಹೇಳಿದರು.

    ಮೂಡಿಗೆರೆ ಹ್ಯಾಂಡ್​ಪೋಸ್ಟ್ ರಾಜ್ಯ ಹೆದ್ದಾರಿ ಸಂರ್ಪಸುವ ವೃತ್ತವಾಗಿದೆ. ದಿನನಿತ್ಯ ಈ ಮಾರ್ಗವಾಗಿ ನೂರಾರು ವಾಹನಗಳು, ಪ್ರವಾಸಿಗರು ಸಂಚರಿಸುತ್ತಾರೆ. ತೇಜಸ್ವಿ ಹೆಸರನ್ನು ವೃತ್ತಕ್ಕೆ ಇಡುವುದರಿಂದ ತೇಜಸ್ವಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಹ್ಯಾಂಡ್​ಪೋಸ್ಟ್ ವೃತ್ತಕ್ಕೆ ತೇಜಸ್ವಿ ಹೆಸರಿಡಲು ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಬೇಕು ಎಂದರು.

    ಕೊಟ್ಟಿಗೆಹಾರ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಪ್ರಭಾಕರ್ ಬಿನ್ನಡಿ ಮಾತನಾಡಿ, ತೇಜಸ್ವಿ ತಮ್ಮ ಕೃತಿಗಳ ಮೂಲಕ ಓದುಗರಲ್ಲಿ ವೈಚಾರಿಕತೆ ಬೆಳೆಸುವ ಜತೆಗೆ ವೈಜ್ಞಾನಿಕ ಮನೋಭಾವ ಹೆಚ್ಚಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts