More

    ರಾಜ್ಯಕ್ಕೆಲ್ಲ ಹೋಮಿಯೋಪಥಿ ಔಷಧ ಹಂಚಿದ ಗುಜರಾತ್​; ಆಯುಷ್​ ಚಿಕಿತ್ಸೆ ಪಡೆದವರಲ್ಲಿ ಸೋಂಕು ದೂರ…!

    ನವದೆಹಲಿ: ಕರೊನಾ ಸೋಂಕು ವ್ಯಾಪಿಸುವುದನ್ನು ತಡೆಗಟ್ಟಲು ಹಾಗೂ ರೋಗ ನಿರೋಧಕವಾಗಿ ರಾಜ್ಯದ ಅರ್ಧದಷ್ಟು ಜನಕ್ಕೆ ಹೋಮಿಯೋಪಥಿ ಔಷಧ ನೀಡಲಾಗಿದೆ. ಈ ರೀತಿ ಔಷಧ ಪಡೆದವರಲ್ಲಿ ಶೇ.99.6 ಜನರು ಕರೊನಾ ಸೋಂಕಿಗೆ ಒಳಗಾಗಿಲ್ಲ…!

    ವಿಶ್ವ ಆರೋಗ್ಯ ಸಂಸ್ಥೆಗೆ ನೀಡಲಾದ ಪ್ರಾತ್ಯಕ್ಷಿಕೆಯಲ್ಲಿ ಗುಜರಾತ್​ ಸರ್ಕಾರ ಈ ಮಾಹಿತಿ ನೀಡಿದೆ. ರಾಜ್ಯದ 6.6 ಕೋಟಿ ಜನಸಂಖ್ಯೆ ಪೈಕಿ ಅರ್ಧದಷ್ಟು ಅಂದರೆ 3.48 ಕೋಟಿ ಮಂದಿಗೆ ಹೋಮಿಯೋಪಥಿ ಔಷಧ ನೀಡಲಾಗಿದೆ. ಜತೆಗೆ, ಆಯುಷ್​ (ಆಯುರ್ವೇದ, ಯುನಾನಿ, ಸಿದ್ಧ, ಯೋಗ, ನ್ಯಾಚುರೋಪಥಿ ಸೇರಿ ಭಾರತೀಯ ವೈದ್ಯ ಪದ್ಧತಿ) ಔಷಧವನ್ನು ರೋಗ ನಿರೋಧಕವಾಗಿ ಪಡೆದವರಲ್ಲಿ ಶೇ.99.69 ಮಂದಿ ಕರೊನಾ ನೆಗೆಟಿವ್​​ ಆಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ; ರಷ್ಯಾ ಸರ್ಕಾರದಿಂದ ತಯಾರಾಯ್ತು ಮತ್ತೊಂದು ಕರೊನಾ ಲಸಿಕೆ; ಮಾನವ ಬಳಕೆಗೆ ಸುರಕ್ಷಿತ

    ಕ್ವಾರಂಟೈನ್​ನಲ್ಲಿದ್ದ 33,268 ಜನರಿಗೆ ಆಯುಷ್​ ಪದ್ಧತಿ ಔಷಧೋಪಚಾರ ನೀಡಲಾಗುತ್ತಿತ್ತು. ಇವರಲ್ಲಿ ಅರ್ಧದಷ್ಟು ಮಂದಿಗೆ ಹೋಮಿಯೋಪಥಿ ಔಷಧವಾದ ಅರ್ಸೆನಿಕಮ್​ ಅಲ್ಬಮ್​-30 ನೀಡಲಾಗಿತ್ತು. ಇವರೆಲ್ಲರೂ ಕರೊನಾ ಸೋಂಕಿನ ವರದಿ ನೆಗೆಟಿವ್​ ಬಂದಿತ್ತು ಎಂದು ಗುಜರಾತ್​ನ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಯಂತಿ ರವಿ ಹೇಳಿದ್ದಾರೆ.

    ಇನ್ನುಳಿದ ಶೇ.0.03 ಜನರಲ್ಲೂ ಕರೊನಾ ಸೋಂಕಿನ ಅಲ್ಪ ಲಕ್ಷಣಗಳಷ್ಟೇ ಕಂಡುಬಂದಿದ್ದವು ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ. ಕಳೆದ ಮಾರ್ಚ್​ನಿಂದ 3.48 ಕೋಟಿ ಡೋಸ್​ನಷ್ಟು ಹೋಮಿಯೋಪಥಿ ಔಷಧ ವಿತರಣೆ ಮಾಡಲಾಗಿದೆ. ಇದು ಎಂದೂವರೆ ತಿಂಗಳನಿಂದ ಎರಡು ತಿಂಗಳವರೆಗೆ ಪರಿಣಾಮಕಾರಿಯಾಗಿರುತ್ತದೆ ಎಮದು ಹೇಳಲಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ವರದಿ ತಿಳಿಸಿದೆ.

    ಇದನ್ನೂ ಓದಿ; ಗಣೇಶ ಹಬ್ಬದಂದು ಬಿಡುಗಡೆಯಾಯ್ತು ನಿತ್ಯಾನಂದನ ಕೈಲಾಸದ ಕರೆನ್ಸಿ; ಭಾರತೀಯ ರೂಪಾಯಿಗೆಷ್ಟು ಮೌಲ್ಯ ? 

    ಇಷ್ಟೇ ಮುಖ್ಯವಾದ ಇನ್ನೊಂದು ಸಂಗತಿ ಎಂದರೆ ಇದು ಕರೊನಾ ವಿರುದ್ಧವೂ ಪರಿಣಾಮಕಾರಿಯೇ ಎಂಬುದರ ಬಗ್ಗೆ ನಡೆಸಲಾಗುತ್ತಿರುವ ಕ್ಲಿನಿಕಲ್​ ಟ್ರಯಲ್​ನಲ್ಲಿ ಸ್ಪಷ್ಟ ಫಲಿತಾಂಶ ಸಿಗುತ್ತಿಲ್ಲ ಎಂದು ಹೇಳಲಾಗಿದೆ.

    ಪ್ರಚಾರಕ್ಕೆ ಐವರಿಗಷ್ಟೇ ಅವಕಾಶ; ರೋಡ್​ಶೋಗೆ ಐದೇ ವಾಹನ; ಚುನಾವಣೆ ಮಾರ್ಗಸೂಚಿ ಪ್ರಕಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts