ನವದೆಹಲಿ: ಕರೊನಾ ಸೋಂಕು ವ್ಯಾಪಿಸುವುದನ್ನು ತಡೆಗಟ್ಟಲು ಹಾಗೂ ರೋಗ ನಿರೋಧಕವಾಗಿ ರಾಜ್ಯದ ಅರ್ಧದಷ್ಟು ಜನಕ್ಕೆ ಹೋಮಿಯೋಪಥಿ ಔಷಧ ನೀಡಲಾಗಿದೆ. ಈ ರೀತಿ ಔಷಧ ಪಡೆದವರಲ್ಲಿ ಶೇ.99.6 ಜನರು ಕರೊನಾ ಸೋಂಕಿಗೆ ಒಳಗಾಗಿಲ್ಲ…!
ವಿಶ್ವ ಆರೋಗ್ಯ ಸಂಸ್ಥೆಗೆ ನೀಡಲಾದ ಪ್ರಾತ್ಯಕ್ಷಿಕೆಯಲ್ಲಿ ಗುಜರಾತ್ ಸರ್ಕಾರ ಈ ಮಾಹಿತಿ ನೀಡಿದೆ. ರಾಜ್ಯದ 6.6 ಕೋಟಿ ಜನಸಂಖ್ಯೆ ಪೈಕಿ ಅರ್ಧದಷ್ಟು ಅಂದರೆ 3.48 ಕೋಟಿ ಮಂದಿಗೆ ಹೋಮಿಯೋಪಥಿ ಔಷಧ ನೀಡಲಾಗಿದೆ. ಜತೆಗೆ, ಆಯುಷ್ (ಆಯುರ್ವೇದ, ಯುನಾನಿ, ಸಿದ್ಧ, ಯೋಗ, ನ್ಯಾಚುರೋಪಥಿ ಸೇರಿ ಭಾರತೀಯ ವೈದ್ಯ ಪದ್ಧತಿ) ಔಷಧವನ್ನು ರೋಗ ನಿರೋಧಕವಾಗಿ ಪಡೆದವರಲ್ಲಿ ಶೇ.99.69 ಮಂದಿ ಕರೊನಾ ನೆಗೆಟಿವ್ ಆಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ; ರಷ್ಯಾ ಸರ್ಕಾರದಿಂದ ತಯಾರಾಯ್ತು ಮತ್ತೊಂದು ಕರೊನಾ ಲಸಿಕೆ; ಮಾನವ ಬಳಕೆಗೆ ಸುರಕ್ಷಿತ
ಕ್ವಾರಂಟೈನ್ನಲ್ಲಿದ್ದ 33,268 ಜನರಿಗೆ ಆಯುಷ್ ಪದ್ಧತಿ ಔಷಧೋಪಚಾರ ನೀಡಲಾಗುತ್ತಿತ್ತು. ಇವರಲ್ಲಿ ಅರ್ಧದಷ್ಟು ಮಂದಿಗೆ ಹೋಮಿಯೋಪಥಿ ಔಷಧವಾದ ಅರ್ಸೆನಿಕಮ್ ಅಲ್ಬಮ್-30 ನೀಡಲಾಗಿತ್ತು. ಇವರೆಲ್ಲರೂ ಕರೊನಾ ಸೋಂಕಿನ ವರದಿ ನೆಗೆಟಿವ್ ಬಂದಿತ್ತು ಎಂದು ಗುಜರಾತ್ನ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಯಂತಿ ರವಿ ಹೇಳಿದ್ದಾರೆ.
ಇನ್ನುಳಿದ ಶೇ.0.03 ಜನರಲ್ಲೂ ಕರೊನಾ ಸೋಂಕಿನ ಅಲ್ಪ ಲಕ್ಷಣಗಳಷ್ಟೇ ಕಂಡುಬಂದಿದ್ದವು ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ. ಕಳೆದ ಮಾರ್ಚ್ನಿಂದ 3.48 ಕೋಟಿ ಡೋಸ್ನಷ್ಟು ಹೋಮಿಯೋಪಥಿ ಔಷಧ ವಿತರಣೆ ಮಾಡಲಾಗಿದೆ. ಇದು ಎಂದೂವರೆ ತಿಂಗಳನಿಂದ ಎರಡು ತಿಂಗಳವರೆಗೆ ಪರಿಣಾಮಕಾರಿಯಾಗಿರುತ್ತದೆ ಎಮದು ಹೇಳಲಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ವರದಿ ತಿಳಿಸಿದೆ.
ಇದನ್ನೂ ಓದಿ; ಗಣೇಶ ಹಬ್ಬದಂದು ಬಿಡುಗಡೆಯಾಯ್ತು ನಿತ್ಯಾನಂದನ ಕೈಲಾಸದ ಕರೆನ್ಸಿ; ಭಾರತೀಯ ರೂಪಾಯಿಗೆಷ್ಟು ಮೌಲ್ಯ ?
ಇಷ್ಟೇ ಮುಖ್ಯವಾದ ಇನ್ನೊಂದು ಸಂಗತಿ ಎಂದರೆ ಇದು ಕರೊನಾ ವಿರುದ್ಧವೂ ಪರಿಣಾಮಕಾರಿಯೇ ಎಂಬುದರ ಬಗ್ಗೆ ನಡೆಸಲಾಗುತ್ತಿರುವ ಕ್ಲಿನಿಕಲ್ ಟ್ರಯಲ್ನಲ್ಲಿ ಸ್ಪಷ್ಟ ಫಲಿತಾಂಶ ಸಿಗುತ್ತಿಲ್ಲ ಎಂದು ಹೇಳಲಾಗಿದೆ.
ಪ್ರಚಾರಕ್ಕೆ ಐವರಿಗಷ್ಟೇ ಅವಕಾಶ; ರೋಡ್ಶೋಗೆ ಐದೇ ವಾಹನ; ಚುನಾವಣೆ ಮಾರ್ಗಸೂಚಿ ಪ್ರಕಟ