More

    ಶಿವಮೊಗ್ಗದಲ್ಲಿ ರಂಗೇರಿದ ಹೋಳಿ ಹಬ್ಬದ ಸಂಭ್ರಮ

    ಶಿವಮೊಗ್ಗ: ನಗರದ ವಿವಿಧ ಭಾಗಗಳಲ್ಲಿ ಬುಧವಾರವೂ ಹೋಳಿ ಹಬ್ಬ ರಂಗೇರಿತ್ತು. ಮುಖ್ಯವಾಗಿ ಗಾಂಧಿ ಬಜಾರ್ ಭಾಗದಲ್ಲಿ ಹೋಳಿ ಸಂಭ್ರಮ ಮನೆ ಮಾಡಿತ್ತು. ನೂರಾರು ಯುವಕರು, ಸಾರ್ವಜನಿಕರು ಬಣ್ಣ ಎರಚಿ ಸಂಭ್ರಮಿಸಿದರು.

    ಗಾಂಧಿ ಬಜಾರ್ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಕಾಮಣ್ಣನ ಪ್ರತಿಕೃತಿಯನ್ನು ಮೆರವಣಿಗೆಯೊಂದಿಗೆ ಕೊಂಡೊಯ್ದು ನಾಗಪ್ಪನ ಕೇರಿಯಲ್ಲಿ ದಹನ ಮಾಡಲಾಯಿತು. ವೀರಶೈವ ಸಮಾಜದ ಪ್ರಮುಖರಾದ ಉಮೇಶ್ ಹಿರೇಮಠ್, ಕೆ.ಆರ್.ಮಂಜುನಾಥ್, ಚೀಲೂರು ಚಂದ್ರು, ಬಾಳೆಕಾಯಿ ಮೋಹನ್, ಮೋಹನ್, ಹಾಲೇಶ್ ಗೌಡ, ನಾಗರಾಜ್, ರಾಘವೇಂದ್ರ, ಕೊಟ್ರೇಶ್, ನಾಗಣ್ಣ ಮತ್ತಿತರರು ಇದ್ದರು. ವಾಸವಿ ಯುವಜನ ಸಂಘದಿಂದ ಗಾಂಧಿಬಜಾರ್‌ನಲ್ಲಿ ಬುಧವಾರ ಸಂಭ್ರಮದ ಹೋಳಿ ಹಬ್ಬವನ್ನು ಆಚರಿಸಲಾಯಿತು. ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದ ಎದುರು ಸಂಭ್ರಮದಿಂದ ಪರಸ್ಪರ ಬಣ್ಣ ಎರಚಿಕೊಂಡರು. ಎಲ್ಲ ವಯೋಮಾನದವರೂ ಸಂತಸದ ಕ್ಷಣಕ್ಕೆ ಸಾಕ್ಷಿಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts