ವಿಜಯವಾಣಿ ಸುದ್ದಿಜಾಲ ಗದಗ
ಜವಾಬ್ದಾರಿಯುತ ನಾಗರಿಕ ಬಣ್ಣದ ಮೇಲೆ ಜನಾಂಗವನ್ನು ಪ್ರತ್ಯೇಕಿಸುವುದು ಬಾರತೀಯ ಸಂಸತಿ ಅಲ್ಲ ಎಂದು ಸ್ಯಾಮ್ ಪಿತ್ರೋಡ ಹೇಳಿಕೆಗೆ ಎಚ್.ಕೆ. ಪಾಟೀಲ ವಿರೋಧ ವ್ಯಕ್ತಪಡಿಸಿದರು.
ಪಿತ್ರಾಜಿರ್ತ ಆಸ್ತಿಯಲ್ಲಿ ಶೇ.55 ರಷ್ಟು ಸರ್ಕಾರಕ್ಕೆ ವರ್ಗಾಯಿಸುವ ಕಾನೂನು ಜಾರಿ ತರಬೇಕು ಎಂದು ಹೇಳಿಕೆ ನೀಡಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಂಟಕ ತಂದೊಡ್ಡಿದ್ದ ಸ್ಯಾಮ್ ಪಿತ್ರೋಡ ಬಣ್ಣದ ಆಧಾರದಲ್ಲಿ ಜನಾಂಗೀಯ ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸಂಕಷ್ಟ ತಂದೊಡ್ಡಿದ್ದರು. ಸ್ಯಾಮ್ ಹೇಳಿಕೆಗೆ ನಗರದಲ್ಲಿ ಎಚ್.ಕೆ. ಪಾಟೀಲ ವಿರೋಧ ವ್ಯಕ್ತಪಡಿಸಿ, ಕೇವಲ ಭಾರತೀಯರನ್ನೇ ಅಷ್ಟೆ ಅಲ್ಲದೇ ಆಫ್ರಿಕನ್ ಅವರನ್ನು ಸ್ಯಾಮ್ ಪಿತ್ರೋಡ ನೋಯಿಸಿದ್ದಾರೆ. ಅದು ಅವರ ಮನಸ್ಥಿತಿ ಏನೆಂಬುದನ್ನು ತಿಳಿಸುತ್ತದೆ. ಸುಧಾರಿತರು, ಸುಂಸತರು, ಮೇಧಾವಿಗಳು, ಬುದ್ಧಿವಂತರು ಎಂಬುವರು ಈ ರೀತಿಯ ಆಲೋಚನೆ ಅವರ ಮನಸ್ಥಿತಿಯಲ್ಲಿ ಹುಟ್ಟಲೇಬಾರದು. ಸ್ಯಾಮ್ ಪಿತ್ರೋಡ ಅವರ ಹೇಳಿಕೆಗೆ ನನ್ನ ಸಹಮತ ಇಲ್ಲ. ಅವರ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು ಮತ್ತು ದೇಶದ ಜನರಲ್ಲಿ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.