ಹಿರಿಯೂರು: ತಾಲೂಕು ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ಪುಷ್ಪಾ ರಂಗನಾಥ್ ಅವಿರೋಧವಾಗಿ ಆಯ್ಕೆಯಾದರು.
ಜಯಲಕ್ಷ್ಮಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಜೆಡಿಎಸ್ ಪಕ್ಷದ ನಾಲ್ವರು ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದರು, ಮೂರು ಜನ ಅಭ್ಯರ್ಥಿಗಳು ನಾಮಪತ್ರ ವಾಪಸು ಪಡೆದ ಕಾರಣ ಪುಷ್ಪಾ ಅವಿರೋಧವಾಗಿ ಆಯ್ಕೆಯಾಗಿದರು.
ಅಧ್ಯಕ್ಷೆ ಲಕ್ಷ್ಮೀದೇವಿ, ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತರಾಯ, ಸದಸ್ಯರಾದ ಓಂಕಾರಪ್ಪ, ತಿಪ್ಪಮ್ಮ, ಚಂದ್ರಪ್ಪ, ಕೆ.ಶಂಕರಮೂರ್ತಿ, ಜಿ.ಕಲ್ಪನಾ, ನಟರಾಜ್, ಮುಕುಂದ್, ವನಿತಾ, ವನಜಾಕ್ಷಿ ಶಿವಣ್ಣ, ಅಪ್ಪಾಜಿ ಇತರರಿದ್ದರು.