ಹಿರಿಯೂರು: ಸಾವಿತ್ರಿಬಾಯಿ ಫುಲೆ ಜನ್ಮ ದಿನದ ಅಂಗವಾಗಿ ತಾಲೂಕಿನ ಹರಿಯಬ್ಬೆ ಸರ್ಕಾರಿ ಪಪೂ ಕಾಲೇಜಿನಲ್ಲಿ ಶುಕ್ರವಾರ ಮಕ್ಕಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.
ಪ್ರಭಾರ ಪ್ರಾಂಶುಪಾಲ ರಾಮಣ್ಣ, ಉಪನ್ಯಾಸಕರಾದ ಶರಣಪ್ಪ, ಹನುಮಂತರಾಯ, ವಿಜಯ್, ದತ್ತಾತ್ರೇಯ, ಶ್ವೇತಾ, ಲೀಲಾವತಿ, ರಹಮತ್ ಇತರರು ಉಪಸ್ಥಿತರಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.