ನವದೆಹಲಿ: ದೇಶ ವಿಭಜನೆಯ ನಂತರ ಹಿಂದು ನಿರಾಶ್ರಿತರು ಮತ್ತು ಮುಸ್ಲಿಂ ವಲಸಿಗರ ನಡುವಿನ ವ್ಯತ್ಯಾಸವನ್ನು ಪಂಡಿತ್ ಜವಾಹರಲಾಲ್ ನೆಹರು ಸ್ಪಷ್ಟವಾಗಿ ತೋರಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸಂಸತ್ನಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಪ್ರಧಾನಿ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಮರ್ಥಿಸಿಕೊಳ್ಳುತ್ತ, ಭಾರತದ ಮೊದಲ ಪ್ರಧಾನಿ ನೆಹರು ಅಸ್ಸಾಂನ ಮುಖ್ಯಮಂತ್ರಿ ಗೋಪಿನಾಥ್ ಬರ್ದೊಲೊಯಿ ಅವರಿಗೆ ಬರೆದ ಪತ್ರದ ಬಗ್ಗೆ ಉಲ್ಲೇಖಿಸಿದರು.
ಭಾರತ ಮತ್ತು ಪಾಕಿಸ್ತಾನ ದೇಶಗಳಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರ ರಕ್ಷಣೆಗೆ ಕರೆ ನೀಡಿದ 1950ರ ನೆಹರು-ಲಿಯಾಕತ್ ಒಪ್ಪಂದವನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಈ ಪತ್ರದಲ್ಲಿ ನೆಹರು ಅವರು ಪಾಕಿಸ್ತಾನದ ಅಲ್ಪಸಂಖ್ಯಾತರ ಬಗ್ಗೆ ಮಾತ್ರ ಮಾತನಾಡಿದ್ದಾರೆ. ಹಾಗಾದರೆ, ನೆಹರು ಕೋಮುವಾದಿಯೇ ಎಂದು ಮೋದಿ ಪ್ರಶ್ನಿಸಿದರು.
ಜೋಗೇಂದ್ರನಾಥ್ ಮಂಡಲ್ ಅವರು ಪಾಕಿಸ್ತಾನದ ಮೊದಲ ಕಾನೂನು ಸಚಿವರಾಗಿದ್ದರು. ಅವರೂ ಪಾಕಿಸ್ತಾನದಲ್ಲಿ ಹಿಂದುಗಳ ಒತ್ತಡ ಮತ್ತು ಕಿರುಕುಳ ಬಗ್ಗೆ ದೂರಿದ್ದಾರೆ ಎಂದು ಪ್ರಧಾನಿ ಮೋದಿ ಲೋಕಸಭೆಯಲ್ಲಿ ಹೇಳಿದರು.
ಅಲ್ಲದೆ ನೆಹರು ಅವರು ಲೋಕಸಭೆಯಲ್ಲಿ ಈ ಬಗ್ಗೆ ಮಾತನಾಡುವಾಗ ಪಾಕಿಸ್ತಾನದಿಂದ ಬರುವ ಮುಸ್ಲಿಮರಿಗೆ ಭಾರತದ ಪೌರತ್ವ ನೀಡಬೇಕು ಎಂದು ಹೇಳಿದ್ದರು ಎಂದು ಸಂಸತ್ಗೆ ತಿಳಿಸಿದರು. (ಏಜೆನ್ಸೀಸ್)