ನೋಯ್ಡಾ: ದೇಶದ ಹಲವು ರಾಜ್ಯಗಳಲ್ಲಿ ಸುರಿಯುತ್ತಿರುವ ಧಾರಕಾರ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಇದೀಗ ಉತ್ತರಪ್ರದೇಶದ ನೋಯ್ಡಾದಲ್ಲಿ ಭಾರೀ ಮಳೆಗೆ ಕಾರುಗಳು ಮುಳುಗಡೆಯಾಗಿರುವ ದೃಶ್ಯ ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಇದನ್ನೂ ಓದಿ: ಕಿರು ಸೇತುವೆಗಳ ವಿಶೇಷ ಯೋಜನೆಗೆ ಚಿಂತನೆ ; ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ
ಯಮುನಾ ನದಿಯ ಹರಿವು ನಿಯಂತ್ರಣವಾದರೂ ಹಿಂಡನ್ ನದಿಯ ನೀರಿನ ಮಟ್ಟ ಮಿತಿಯನ್ನು ಮೀರಿ ಹರಿದ ಕಾರಣ ನೋಯ್ಡಾ ಇಕೋಟೆಕ್ನ 3 ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಹಲವಾರು ಕಾರುಗಳು ನೀರಿನಲ್ಲಿ ಮುಳುಗಡೆಯಾಗಿವೆ. ನೀರಿನ ಮಟ್ಟ 201 ಮೀಟರ್ ದಾಟಿದ್ದರಿಂದ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ನಿರಂತರ ಮಳೆಗೆ ಕನಿಷ್ಠ 200 ಮನೆಗಳು ಮುಳುಗಿದ್ದು, ಸುಮಾರು 500 ಜನರನ್ನು ಸದ್ಯ ಸ್ಥಳಾಂತರಿಸಲಾಗಿದೆ,(ಏಜೆನ್ಸೀಸ್).
ಕಾಲೇಜಿಗೆ ಭೇಟಿ ನೀಡಲಿದ್ದಾರೆ ನಟಿ ತಮನ್ನಾ ಭಾಟಿಯಾ; ಕಾರಣವೇನು? ಇಲ್ಲಿದೆ ಮಾಹಿತಿ