More

    ಬೆಳಗಿತು ಹೈಮಾಸ್ಟ್ ವಿದ್ಯುತ್ ದೀಪ

    ಅಕ್ಕಿಆಲೂರ: ಪಟ್ಟಣದ ಸಿಂಧೂರ ಸಿದ್ದಪ್ಪ ವೃತ್ತದಲ್ಲಿ ಕಳೆದ 10 ತಿಂಗಳಿಂದ ಸ್ಥಗಿತಗೊಂಡಿದ್ದ ಹೈಮಾಸ್ಟ್ ಕಂಬಕ್ಕೆ ವಿದ್ಯುತ್ ಸರಬರಾಜು ಮಾಡುವುದರ ಮೂಲಕ ಭಾನುವಾರದಿಂದ ಆರಂಭಗೊಂಡಿದೆ.

    2020ರ ಮಾರ್ಚ್ ತಿಂಗಳಲ್ಲಿ ಹಾನಗಲ್ಲ ತಾಲೂಕು ಲೋಕೋಪಯೋಗಿ ಇಲಾಖೆಯ ಪಟ್ಟಣದ ಪ್ರಮುಖ ಜನನಿಬೀಡ ಪ್ರದೇಶವಾದ ಸಿಂಧೂರ ಸಿದ್ದಪ್ಪ ವೃತ್ತದಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಹೈಮಾಸ್ಟ್ ಕಂಬ ನಿರ್ಮಾಣ ಮಾಡಲು ಹಾವೇರಿಯ ಗಂಗಾಧರ ಎಂಬುವರಿಗೆ ಗುತ್ತಿಗೆ ನೀಡಿತ್ತು. ಕಂಬಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು, ಕಾಂಕ್ರೀಟ್ ರಸ್ತೆ ಅಗೆಯಬೇಕಾಗಿದ್ದರಿಂದ ಅದನ್ನೇ ನೆಪವನ್ನಾಗಿಸಿಕೊಂಡು ಕಂಬಕ್ಕೆ ವಿದ್ಯುತ್ ನೀಡದೆ ನಿರ್ಲಕ್ಷ್ಯ ವಹಿಸಲಾಗಿತ್ತು.

    ಈ ಕುರಿತು ಜ. 28ರಂದು ‘ವಿಜಯವಾಣಿ’ಯಲ್ಲಿ ಬೆಳಗದ ಹೈಮಾಸ್ಟ್ ವಿದ್ಯುತ್ ದೀಪ ಶೀರ್ಷಿಕೆಯಡಿ ವಿಸõತ ವರದಿ ಪ್ರಕಟವಾಗಿತ್ತು. ವರದಿಯಿಂದ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಕಾಂಕ್ರೀಟ್ ರಸ್ತೆ ಅಗೆಯದೆ ರಸ್ತೆ ಮೇಲ್ಭಾಗದಿಂದ ಕಂಬಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಈ ಮೂಲಕ ಸಾರ್ವಜನಿಕರ ಹಲವು ದಿನಗಳ ಸಮಸ್ಯೆ ಇತ್ಯರ್ಥಗೊಂಡಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts