ಬೆಂಗಳೂರು: ಸಭಾಪತಿ ಸ್ಥಾನದಲ್ಲಿರುವ ಪ್ರತಾಪ್ ಚಂದ್ರ ಶೆಟ್ಟಿ ಅವರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು ಅವರನ್ನು ಹೊರಗಿಟ್ಟು ವಿಧಾನಪರಿಷತ್ ಕಲಾಪ ನಡೆಸಲು ಮುಂದಾಗಿದ್ದರು. ವಿಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ ಸದಸ್ಯರು ಇದಕ್ಕೆ ಪ್ರತಿರೋಧ ತೋರಿ ಕೈ-ಕೈ ಮಿಲಾಯಿಸಿದ ಕಾರಣ ಪರಿಷತ್ತಿನ ಇತಿಹಾಸದಲ್ಲಿ ಕಪ್ಪುಚುಕ್ಕೆಯೊಂದು ದಾಖಲಾಯಿತು.
ಉಪಸಭಾಪತಿಯಾಗಿರುವ ಜೆಡಿಎಸ್ನ ಎಸ್.ಎಲ್.ಧರ್ಮೇಗೌಡ ಅವರನ್ನು ಸಭಾಪತಿ ಸ್ಥಾನದಲ್ಲಿ ಕುಳ್ಳಿರಿಸಿದ ಆಡಳಿತ ಪಕ್ಷದ ಸದಸ್ಯರು ಕಲಾಪ ಶುರುಮಾಡುವಂತೆ ಆಗ್ರಹಿಸಿದರು. ಇದೇ ವೇಳೆ, ಕಾಂಗ್ರೆಸ್ ಸದಸ್ಯರು ಸಭಾಪತಿ ಪೀಠದತ್ತ ನುಗ್ಗಿ ಧರ್ಮೇಗೌಡರನ್ನು ಸಭಾಪತಿ ಸ್ಥಾನದಿಂದ ಎಬ್ಬಿಸಿ ಹಿಡಿದೆಳೆದುಕೊಂಡು ಅಲ್ಲಿಂದ ಕೆಳಕ್ಕೆ ಇಳಿದಿದ್ದರು. ಈ ಸಂದರ್ಭದಲ್ಲಿ ಆಡಳಿತ ಪಕ್ಷ ಮತ್ತು ಕಾಂಗ್ರೆಸ್ ಸದಸ್ಯರು ಕೈ – ಕೈ ಮಿಲಾಯಿಸಿ ಘಟನೆಯೂ ನಡೆಯಿತು.
ಇದನ್ನೂ ಓದಿ: ಸಭಾಪತಿ ವಿರುದ್ದ ಅವಿಶ್ವಾಸ ಮಂಡನೆಗೆ ಸಿದ್ಧತೆ – ಮೇಲ್ಮನೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ?
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಪಸಭಾಪತಿ ಧರ್ಮೇಗೌಡರು ಅಸಹಾಯಕರಾಗಿ ಹೇಳಿದ್ದಿಷ್ಟು – ಒಬ್ಬರು ಪೀಠದಲ್ಲಿ ತಂದು ಕೂರಿಸಿದರು. ಮತ್ತೊಬ್ಬರು ಪೀಠದಿಂದ ಎಳೆದೊಯ್ದರು. ನಾನೊಬ್ಬನೇ ಇರುವುದರಿಂದ ಏನು ಮಾಡುವುದು?
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..