ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಹೆಗ್ಗೇರಿಯ ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿಯ ಜಿಎನ್ಎಂ ಹಾಗೂ ಬಿಎಸ್ಸಿ ನರ್ಸಿಂಗ್ ಮಹಾವಿದ್ಯಾಲಯದ ವಿದ್ಯಾಥಿ೯ಗಳಿಗೆ ಶುಕ್ರವಾರ ದೀಪ ಬೆಳಗುವ ಮೂಲಕ ಪ್ರಮಾಣ ಸ್ವೀಕಾರ ಬೋಧಿಸಲಾಯಿತು.
ಈ ವೇಳೆ ಸಮಿತಿ ಕಾರ್ಯದಶಿ೯ ಡಾ.ಸಂಜೀವ ಜೋಶಿ ಮಾತನಾಡಿ, ನರ್ಸಿಂಗ್ ವೃತ್ತಿ ಶ್ರೇಷ್ಠ ವೃತ್ತಿಯಾಗಿದ್ದು, ಭಾರತದ ನರ್ಸಿಂಗ್ ವಿದ್ಯಾಥಿರ್ಗಳಿಗೆ ವಿದೇಶದಲ್ಲಿ ಹೆಚ್ಚಿನ ಬೇಡಿಕೆ ಇದ್ದು, ತ್ಯಾಗ ಮನೋಭಾವದ ವತ್ತಿಯನ್ನು ಆರಿಸಿಕೊಂಡ ವಿದ್ಯಾಥಿ೯ಗಳನ್ನು ಅಭಿನಂದಿಸಿದರು.
ಡಾ.ಪಿ.ಕೆ.ಗಂಡಮಾಲಿ ಮಾತನಾಡಿ, ಇದೇ ಶೈಕ್ಷಣಿಕ ವರ್ಷದಿಂದ ಬಿಎಸ್ಸಿ ನರ್ಸಿಂಗ್ ಪ್ರಾರಂಭಿಸಲಾಗಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ ಸಾಕಷ್ಟು ವಿದ್ಯಾಥಿರ್ಗಳು ಪ್ರವೇಶಾತಿ ಪಡೆದಿದ್ದು ನಮ್ಮ ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಸಮಿತಿ ಖಜಾಂಚಿ ಎಸ್.ಆರ್.ಮಾಮಲೆದೇಶಪಾಂಡೆ, ಆಯುರ್ವೇದ ಮಹಾವಿದ್ಯಾಲದ ಪ್ರಾಚಾರ್ಯ ಡಾ.ಪ್ರಶಾಂತ ಎ.ಎಸ್., ನರ್ಸಿಂಗ್ ಕಾಲೇಜಿನ ಪ್ರಾಚಾಯೆ೯ ಸವಿತಾ ಪಿ.ಸಿ., ಮತ್ತಿತರರು ಪಾಲ್ಗೊಂಡಿದ್ದರು.