ಕಲಬುರಗಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕಳೆದ ರಾತ್ರಿಯಿಂದ ಮಂಗಳವಾರ ಬೆಳಗಿನವರೆಗೂ ಅಬ್ಬರದ ಮಳೆ ಸುರಿದು ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಕಲಬುರಗಿ ನಗರದ ಅತ್ತರ ಕಾಂಪೌಂಡ್ ಬಳಿಯ ಸಿದ್ದೇಶ್ವರ ನಗರದಲ್ಲಿ ಇಂದು ನಸುಕಿನ ಜಾವ ಮನೆಯೊಂದು ಕುಸಿದು ಬಿದ್ದು ಮೂವರಿಗೆ ಗಾಯಗಳಾಗಿವೆ.
ಕುಸನೂರ ರಸ್ತೆಯಲ್ಲಿ ಇರುವ ಪೂಜಾ ಕಾಲನಿ, ಶಹಾಬಾದ ರಸ್ತೆ ಕೆಲ ಕಾಲನಿಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮ ಅಲ್ಲದೆ ಗಂಗಾ ನಗರ ಕಣಿ ಮೊದಲ ಪ್ರದೇಶದ ಕೆಳ ಭಾಗದ ಮನೆಗಳಿಗೆ ನೀರು ನುಗ್ಗಿದೆ. ಪೂಜಾ ಕಾಲನಿಯ ಶಿಕ್ಷಕ ಭೀಮಸಿಂಗ್ ಅವರ ಮನೆಗೆ ನೀರು ಮನೆಯಲ್ಲಿನ ಸಾಮಾನುಗಳು ಹಾಳಾಗಿ ಹೋಗಿವೆ. ಸೇಡಂ ರಸ್ತೆ, ಕೇಂದ್ರ ಬಸ್ ನಿಲ್ಸಾಣ, ಜೇವರ್ಗಿ ಕ್ರಾಸ್ ಬಳಿಯ ಕಾಂಪ್ಲೆಕ್ಸ್ ಗೆ ನೀರು ನುಗ್ಗಿದೆ. ಕಲಬುರಗಿ ನಗರದಲ್ಲಿ ಮೂರು ಮನೆಗಳು ಕುಸಿದಿವೆ.
ಇದನ್ನೂ ಓದಿ: ವಿಶ್ವಸಂಸ್ಥೆಯ ಸಿಎಸ್ಡಬ್ಲ್ಯು ಸದಸ್ಯತ್ವ ಗೆದ್ದ ಭಾರತ; ಚೀನಾಕ್ಕೆ ಭಾರಿ ಮುಖಭಂಗ
ಜಿಲ್ಲೆಯ ಕಮಲಾಪುರ ತಾಲೂಕಿನ ಸಿರಗಾಪುರ, ಮಹಾಗಾಂವ ಮೊದಲಾದ ಗ್ರಾಮಗಳಲ್ಲಿ ಕೆಲವು ಮನೆಗಳಿಗೆ ಮಳೆ ನೀರು ನುಗ್ಗಿದೆ.
ಜಿಲ್ಲೆಯ ಹಳ್ಳ ತುಂಬಿ ಹರಿಯುತ್ತಿದ್ದು ಕೆಲವಡೆ ತಾತ್ಕಾಲಿವಾಗಿ ಸಂಪರ್ಕ ಕಡಿತಗೊಂಡಿದೆ. ಪೊಲೀಸ್ ಮತ್ತು ಕಂದಾಯ ಸಿಬ್ಬಂದಿ ಕಾರ್ಯ ಚುರುಕುಗೊಳಿಸಿದ್ದಾರೆ.