ಬೆಂಗಳೂರು: ಕೆಲವೇ ಸಮಯದ ಹಿಂದೆ ಕರೊನಾಗೆ ಬಲಿಯಾಗಿರುವ ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ, ಸಂಸದ ಸುರೇಶ್ ಅಂಗಡಿ ಅವರಿಗೆ ಕರೊನಾ ಸೋಂಕು ತಗುಲಿರುವುದು ಸೆ. 11ರಂದು ದೃಢಪಟ್ಟಿತ್ತು.
“ಕರೊನಾ ಪರೀಕ್ಷೆ ವರದಿ ಪಾಸಿಟಿವ್ ಎಂದು ಬಂದಿದೆ. ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆ ಪಡೆಯುತ್ತಿದ್ದೇನೆ. ಇತ್ತೀಚೆಗೆ ನನ್ನ ಸಂಪರ್ಕದಲ್ಲಿದ್ದವರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು, ನಿಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಲು ವಿನಂತಿಸಿಕೊಳ್ಳುತ್ತೇನೆ” ಎಂದು ಎಲ್ಲರ ಬಗ್ಗೆ ಕಾಳಜಿ ವಹಿಸಿ ಅವರು ಟ್ವೀಟ್ ಮಾಡಿದ್ದರು.
ಮಾತ್ರವಲ್ಲ, ಆ ಬಳಿಕ ಕರೊನಾ ಸೋಂಕು ದೃಢಪಟ್ಟ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖಂಡು, ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಣಿಪುರದ ಸಂಸದ ಪ್ರಹ್ಲಾದ್ ಸಿಂಗ್ ಪಟೇಲ್, ಕರ್ನಾಟಕದ ಉಪ ಮುಖ್ಯಮಂತ್ರಿಗಳಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ಎಂ.ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಯಬಾಗದ ಶಾಸಕ ದುರ್ಯೋಧನ ಐಹೊಳೆ ಎಲ್ಲರಿಗೂ ಸಂಸದ ಅಂಗಡಿಯವರು ಟ್ವೀಟ್ ಮಾಡಿ ಬೇಗ ಚೇತರಿಸಿಕೊಳ್ಳಿ ಎಂಬುದಾಗಿ ಹಾರೈಸಿದ್ದರು.
ತನ್ನ ನಂತರ ಸೋಂಕಿಗೆ ಒಳಗಾದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜನಪ್ರತಿನಿಧಿ ಸ್ನೇಹಿತರೆಲ್ಲರಿಗೂ ಬೇಗ ಗುಣವಾಗಿ ಮತ್ತೆ ಜನಸೇವೆಗೆ ಮರಳಿ ಎಂಬಂತೆ ಪ್ರಾರ್ಥಿಸಿದ್ದ ಸುರೇಶ್ ಅಂಗಡಿಯವರೇ ಈಗ ಮರಳಿ ಬಾರದ ಲೋಕಕ್ಕೆ ತೆರಳಿರುವುದು ಬಹಳಷ್ಟು ಮಂದಿಗೆ ಅಪಾರ ದುಃಖ ಉಂಟು ಮಾಡಿದೆ.
ನಾನು #Covid19 ಪರೀಕ್ಷೆಗೆ ಒಳಗಾಗಿದ್ದು, ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ. ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆ ಪಡೆಯುತ್ತಿದ್ದೇನೆ.
ಇತ್ತೀಚೆಗೆ ನನ್ನ ಸಂಪರ್ಕದಲ್ಲಿದ್ದವರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು, ನಿಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಲು ವಿನಂತಿಸಿಕೊಳ್ಳುತ್ತೇನೆ.@PMOIndia
— Suresh Angadi (@SureshAngadi_) September 11, 2020
Praying for your good health and speedy recovery @PemaKhanduBJP Ji!! https://t.co/6os2ExVIao
— Suresh Angadi (@SureshAngadi_) September 15, 2020
ರಾಜ್ಯದ ಮಾನ್ಯ ಗೃಹ ಸಚಿವರು ಹಾಗೂ ಆತ್ಮೀಯರಾದ ಶ್ರೀ @BSBommai ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಅವರು ಆದಷ್ಟು ಬೇಗ ಸಂಪೂರ್ಣ ಗುಣಮುಖರಾಗಿ ಮತ್ತೆ ಎಂದಿನಂತೆ ನಾಡಿನ ಜನರ ಸೇವೆಯಲ್ಲಿ ನಿರತರಾಗಲಿ ಎಂದು ಪ್ರಾರ್ಥಿಸುತ್ತೇನೆ. https://t.co/eXLg8icu1n
— Suresh Angadi (@SureshAngadi_) September 16, 2020
ईश्वर से आपके जल्द स्वस्थ होने की कामना करता हूँ। @nitin_gadkari जी https://t.co/YY51AcBUeC
— Suresh Angadi (@SureshAngadi_) September 16, 2020
ईश्वर से आपके जल्द स्वस्थ होने की कामना करता हूँ। @prahladspatel Ji https://t.co/ipJy90Nw0i
— Suresh Angadi (@SureshAngadi_) September 17, 2020
ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಾದ ಶ್ರೀ @drashwathcn ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸುತ್ತೇನೆ. https://t.co/3HW1OHgmVr
— Suresh Angadi (@SureshAngadi_) September 19, 2020
ರಾಯಭಾಗ ಕ್ಷೇತ್ರದ ಶಾಸಕರು ಹಾಗೂ ಆತ್ಮೀಯರಾದ ಶ್ರೀ ದುರ್ಯೋಧನ ಐಹೊಳೆ ಅವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಅವರು ಶೀಘ್ರ ಸೋಂಕಿನಿಂದ ಗುಣಮುಖರಾಗಿ, ಎಂದಿನಂತೆ ಜನ ಸೇವೆಯಲ್ಲಿ ನಿರತರಾಗಲಿ ಎಂದು ಪ್ರಾರ್ಥಿಸುತ್ತೇನೆ. @BJP4Karnataka pic.twitter.com/3JqVVLY70x
— Suresh Angadi (@SureshAngadi_) September 21, 2020
ರಾಜ್ಯದ ಮಾನ್ಯ ಉಪಮುಖ್ಯಮಂತ್ರಿಗಳು, ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ @GovindKarjol ಅವರು, ಕೊರೋನಾ ಸೋಂಕಿನಿಂದ ಆದಷ್ಟು ಬೇಗ ಸಂಪೂರ್ಣ ಗುಣಮುಖರಾಗಿ ಎಂದಿನಂತೆ ನಾಡಿನ ಜನರ ಸೇವೆಗೆ ಮರಳಲಿ ಎಂದು ಹಾರೈಸುತ್ತೇನೆ. https://t.co/JWXC5U90af
— Suresh Angadi (@SureshAngadi_) September 22, 2020