More

    ‘ರಿಷಿ ಕಪೂರ್​ ಜೀ ಅವರು ಪ್ರತಿಭೆಯ ಶಕ್ತಿಕೇಂದ್ರವಾಗಿದ್ದರು..ನಾನೆಂದೂ ಅವರನ್ನು ಮರೆಯುವುದಿಲ್ಲ.. ‘

    ನವದೆಹಲಿ: ಬಾಲಿವುಡ್​ ಹಿರಿಯ ನಟ ರಿಷಿ ಕಪೂರ್​ ಇಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ಸಾವಿಗೆ ಬಾಲಿವುಡ್​ ಹಾಗೂ ರಾಜಕೀಯ ಗಣ್ಯರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.
    ಹಲವು ಸಚಿವರು, ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಟ್ವೀಟ್​ ಮಾಡುವ ಮೂಲಕ ರಿಷಿ ಕಪೂರ್​ಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

    ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಕೂಡ ಟ್ವೀಟ್ ಮಾಡಿ, ರಿಷಿ ಕಪೂರ್​ ನಿಧನಕ್ಕೆ ನೋವು ವ್ಯಕ್ತಪಡಿಸಿದ್ದಾರೆ.

    ಬಹುಮುಖ ಪ್ರತಿಭೆ, ಪ್ರೀತಿ, ಉಲ್ಲಾಸ..ಈ ಮೂರರ ಸಮ್ಮಿಳತಕ್ಕೆ ಇರುವ ಹೆಸರೇ ರಿಷಿ ಕಪೂರ್​ ಜೀ. ಅವರು ಪ್ರತಿಭೆಯ ಶಕ್ತಿಕೇಂದ್ರವಾಗಿದ್ದರು. ನಾನು ಅವರೊಂದಿಗೆ ನಡೆಸಿದ ಮಾತುಕತೆಯನ್ನು ಸದಾ ನೆನಪಿಸಿಕೊಳ್ಳುತ್ತೇನೆ.

    ನಮ್ಮಿಬ್ಬರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲೂ ಪರಸ್ಪರ ಮಾತುಕತೆ ನಡೆಯುತ್ತಿತ್ತು. ರಿಷಿ ಕಪೂರ್​ ಅವರು ಚಲನಚಿತ್ರಗಳಲ್ಲಿ ಮತ್ತು ಭಾರತದ ಅಭಿವೃದ್ಧಿ ಬಗ್ಗೆ ತುಂಬ ಆಸಕ್ತಿ ಹೊಂದಿದ್ದರು. ಅವರ ನಿಧನದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ಸಾಂತ್ವನಗಳು. ಓಂ ಶಾಂತಿ ಎಂದು ಟ್ವೀಟ್​ ಮಾಡಿದ್ದಾರೆ. (ಏಜೆನ್ಸೀಸ್​)

    ರಿಷಿ ಕಪೂರ್​ ನಿಧನಕ್ಕೆ ರಾಜಕೀಯ ನಾಯಕರ ಸಂತಾಪ; ಮತ್ತೋರ್ವ ಅದ್ಭುತ ನಟ ಮರೆಯಾಗಿದ್ದು ತುಂಬಲಾರದ ನಷ್ಟವೆಂದ ಸಿಎಂಗಳು, ಕೇಂದ್ರ ಸಚಿವರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts