ಹಾವೇರಿ: ಶ್ರೀ ಬಸವೇಶ್ವರ ನಗರ ಮಹಿಳಾ ನಾಗರಿಕರ ವೇದಿಕೆ ವತಿಯಿಂದ ಸಿ ಬ್ಲಾೃಕ್ನ ಗಣೇಶ ದೇವಸ್ಥಾನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಕ್ಷಯ ತೃತೀಯ ಹಾಗೂ ಬಸವ ಜಯಂತಿ ವಚನ ಗಾಯನ ಸ್ಪರ್ಧೆಯಲ್ಲಿ ಶಶಿರೇಖಾ ಮಾಗನೂರ ಪ್ರಥಮ, ಲತಾ ಹಳಕೊಪ್ಪ ದ್ವಿತೀಯ, ಪ್ರೇಮಾ ಜೋಗಾರ ತೃತೀಯ ಸ್ಥಾನ ಹಾಗೂ ಮಮತಾ ಹಿಂಚಿಗೇರಿ ಸಮಾಧಾನಕರ ಬಹುಮಾನ ಪಡೆದಿದ್ದಾರೆ.
ಪಲ್ಲವಿ ಗುಡಗೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಕಾರ್ಯದರ್ಶಿ ಲೀಲಾವತಿ ಪಾಟೀಲ, ಖಜಾಂಚಿ ಶಶಿಕಲಾ ಮಠದ, ಸದಸ್ಯರು ಪಾಲ್ಗೊಂಡಿದ್ದರು.