More

    ಹಾವೇರಿ ತಹಸೀಲ್ದಾರ್ ಗಿರೀಶ ಸ್ವಾದಿ ನಾಪತ್ತೆ; ಹಲವು ಅನುಮಾನಗಳಿಗೆ ಕಾರಣವಾದ ನಾಪತ್ತೆ ಪ್ರಕರಣ

    ಹಾವೇರಿ: ತಹಸೀಲ್ದಾರ್ ಗಿರೀಶ ಸ್ವಾದಿ ನಾಪತ್ತೆಯಾಗಿರುವ ಕುರಿತು ಇಲ್ಲಿನ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ತಮಗೆ ಪರಿಚಯವಿದ್ದ ಬೆಳಗಾವಿಯ ಆಜಾಮ್ ನಗರದ ಜಹೂರ್ ತಿಗಡಿಯವರ ಎಂಬುವರ ಮೊಬೈಲ್ ನಂಬರ್ ನಿಂದ ಗಿರೀಶ ಅವರು ಅ.31ರಂದು ರಾತ್ರಿ 9.30ಕ್ಕೆ ಪತ್ನಿಗೆ ಕರೆ ಮಾಡಿದ್ದರು. ‘ನಾಳೆ ರಾಜ್ಯೋತ್ಸವ ಕಾರ್ಯಕ್ರಮ ಇದೆ. ಇಂದು ಮನೆಗೆ ಬರಲ್ಲ. ಹಾವೇರಿ ಐಬಿ ಅಥವಾ ಶಿವಾ ರೆಸಿಡೆನ್ಸಿಯಲ್ಲಿ ಉಳಿದುಕೊಳ್ಳುವೆ’ ಎಂದಿದ್ದರು.

    ಬಳಿಕ‌ ಅವರ ಮೊಬೈಲ್ ಫೋನ್ ಸ್ವಿಚ್ ಆಗಿತ್ತು. ಈ ಕುರಿತು ಶಿವಾ ರೆಸಿಡೆನ್ಸಿಯಲ್ಲಿ ವಿಚಾರಿಸಿದಾಗ ರೂಮ್ ನಂಬರ್ 112 ನಲ್ಲಿ ಉಳಿದುಕೊಂಡಿದ್ದ ಗಿರೀಶ ಅವರು ನ.1ರಂದು ನಸುಕಿನ ಜಾವ ಯಾರಿಗೂ ಹೇಳದೇ ತೆರಳಿದ್ದಾರೆ ಎಂದು ಗಿರೀಶ ಅವರ ಪತ್ನಿ ಭಾಗ್ಯಶ್ರೀ ಶಹರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣದಲ್ಲಿ ಹೇಳಿಕೊಂಡಿದ್ದಾರೆ.

    ಅ.31ರಿಂದ ನಾಪತ್ತೆಯಾಗಿರುವ ತಹಸೀಲ್ದಾರ್ ಯಾರ ಸಂಪರ್ಕಕ್ಕೂ ಬಂದಿಲ್ಲ ಎನ್ನಲಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಕುರಿತು ಶಹರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts