ಹಾವೇರಿ: ತಾಲೂಕಿನ ದೇವಗಿರಿ ಗ್ರಾಮದ ಜಿಲ್ಲಾಧಿಕಾರಿ ಕಚೇರಿ ಸಮೀಪ ಇರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಇಂಜಿನಿಯರಿಂಗ್ ಬಾಲಕರ ವಸತಿ ನಿಲಯದಲ್ಲಿ ಬೊರವೆಲ್ ನೀರು ಖಾಲಿಯಾಗಿದ್ದು, ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಹಾಸ್ಟೆಲ್ ವಿದ್ಯಾರ್ಥಿಗಳು ಎಸ್ಎಫ್ಐ ನೇತೃತ್ವದಲ್ಲಿ ಶನಿವಾರ ವಸತಿ ನಿಲಯದ ಎದುರು ಪ್ರತಿಭಟನೆ ನಡಸಿದರು.
ಹಾಸ್ಟೆಲ್ನ ಬೋರ್ವೆಲ್ ನೀರು ಕಡಿಮೆಯಾಗಿದ್ದು, ಕುಡಿಯಲು, ದಿನಬಳಕೆ ಮಾಡಲು ನೀರು ಇಲ್ಲದಂತಾಗಿದೆ. ಇದರಿಂದಾಗಿ ವಸತಿ ನಿಲಯದ ಎಲ್ಲ ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದಾರೆ. ಸ್ನಾನ ಮಾಡಲು, ಬಟ್ಟೆ ಒಗೆಯಲು, ಶೌಚಗೃಹಕ್ಕೆ ನೀರು ಇಲ್ಲದಂತಾಗಿದೆ. ಇಷ್ಟೆಲ್ಲ ಸಮಸ್ಯೆ ಇದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಫೋನ್ ಸಹ ಎತ್ತುತ್ತಿಲ್ಲ. ಕುಡಿಯುವ ನೀರು ಜತೆಗೆ ಟ್ಯಾಂಕರ್ ನೀರು ಪೂರೈಕೆ ಮಾಡುವಂತೆ ಆಗ್ರಹಿಸಿದ್ದಾರೆ.
ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್., ರಮೇಶ ಎಲ್., ರೇವಣಸಿದ್ದಪ್ಪ ಕೆ.ಆರ್., ಚೇತನ ಕೆ., ಶಿವಕುಮಾರ, ಸಾಗರ ಎಸ್., ದರ್ಶನ ಪಿ.ಎಚ್., ಅಭಿಷೇಕ ಎನ್., ಶ್ರೀಧರ ಯು., ಪುನೀತ್ಎಂ., ಇತರರಿದ್ದರು.