More

    ರೈತರಿಂದ ರೈತರಿಗೆ ಒಂದು ದಿನದ ತರಬೇತಿ

    ಹಾವೇರಿ: ರೇಷ್ಮೆ ಇಲಾಖೆಯಿಂದ ರೈತರಿಂದ ರೈತರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಗುರುವಾರ ಗುತ್ತಲ ಗ್ರಾಮದಲ್ಲಿ ನಾಗಪ್ಪ ಗುಡ್ಡಪ್ಪ ಗೊರವರ ಅವರ ಹಿಪ್ಪು ನೇರಳೆ ತೋಟದಲ್ಲಿ ಜರುಗಿತು.
    ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ ಶ್ರೀನಿವಾಸಲು ಹಿಪ್ಪು ನೇರಳೆ ತೋಟ ಹಾಗೂ ರೇಷ್ಮೆ ಹುಳುಗಳಿಗೆ ತಗಲುವ ರೋಗಗಳ ನಿಯಂತ್ರಣ ಕ್ರಮಗಳ ಕುರಿತು ರೈತರಿಗೆ ಮಾಹಿತಿ ನೀಡಿದರು.
    ರೇಷ್ಮೆ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುಸ್ವಾಮಿ ಮಾತನಾಡಿ, ರೇಷ್ಮೆ ಕೃಷಿಯಲ್ಲಿ ಸಾವಯವ ಕೃಷಿ ಪದ್ಧತಿಗಳ ಬಗ್ಗೆ ಹಾಗೂ ಇಲಾಖೆಯ ಸೌಲಭ್ಯಗಳ ಬಗ್ಗೆ ವಿವರಿಸಿದರು.
    ಕಾರ್ಯಕ್ರಮದಲ್ಲಿ ರೇಷ್ಮೆ ಸಹಾಯಕ ನಿರ್ದೇಶಕ ಬಿ.ಆರ್.ಅಂಗಡಿ, ಪ್ರಭಾರ ರೇಷ್ಮೆ ವಿಸ್ತರಣಾಧಿಕಾರಿ ಪಿ.ಬಿ.ಗೋಣೆಮ್ಮನವರ, ರೇಷ್ಮೆ ವಲಯಾಧಿಕಾರಿ ಆರ್.ಎಸ್.ಜ್ಯೋತಿ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts