More

    ಪ್ರಮಾಣ ಪತ್ರದಲ್ಲಿ ಪಂಚಮಸಾಲಿ ಸೇರಿಸಲು ಆಗ್ರಹ

    ಹಾವೇರಿ: ವೀರಶೈವ/ ಲಿಂಗಾಯತ ಪಂಚಮಸಾಲಿ ಜಾತಿ ಹಾಗೂ ಆದಾಯ ಪ್ರಮಾಣ ಪತ್ರದಲ್ಲಿ ‘ಪಂಚಮಸಾಲಿ’ ಎಂದು ಸೇರಿಸಿ ಪ್ರಮಾಣ ಪತ್ರವನ್ನು ನೀಡುವಂತೆ ಒತ್ತಾಯಿಸಿ ಹಾವೇರಿ ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದಿಂದ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಅವರ ಮೂಲಕ ಜಿಲ್ಲಾಧಿಕಾರಿಯವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಲಾಯಿತು.
    ಈ ಸಂದರ್ಭದಲ್ಲಿ ಹರಿಹರ ಪೀಠದ ಧರ್ಮದರ್ಶಿಗಳಾದ ಪಿ.ಡಿ.ಶಿರೂರ ಹಾಗೂ ಮಹೇಶ ಹಾವೇರಿ, ರಾಜ್ಯ ಸಂಘದ ಉಪಾಧ್ಯಕ್ಷ ಶಂಕರಗೌಡ ಪಾಟೀಲ, ರಾಜ್ಯ ಸಮಿತಿ ಸದಸ್ಯ ಶಂಕರ ಬಿಸರಳ್ಳಿ, ಜಿಲ್ಲಾಧ್ಯಕ್ಷ ನಾಗೇಂದ್ರ ಕಟಕೋಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಹಾದಿಮನಿ, ಸೋಮಶೇಖರ ಎಣ್ಣಿಯವರ, ಡಿ.ಪಿ.ಕೆಂಗೊಂಡ, ಜಗದೀಶ ಕನವಳ್ಳಿ, ತಾಲೂಕು ಶಹರ ಘಟಕದ ಅಧ್ಯಕ್ಷ ನಂಜುಂಡೇಶ ಕಳ್ಳೇರ, ಮಹಿಳಾ ಪದಾಧಿಕಾರಿಗಳಾದ ಪ್ರಮೀಳಾ ಜಂಬಗಿ, ಜ್ಯೋತಿ ಕುದರಾಳ, ನಾಗರತ್ನಾ ಗುಡಿಹಳ್ಳಿ, ಗೀತಾ ಕಾಕೋಳ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts