ಹಾವೇರಿ: ಲೋಕಸಭಾ ಚುನಾವಣೆ ಮತದಾನದ ಹಿನ್ನೆಲೆಯಲ್ಲಿ ಮೇ 7ರಂದು ಜಿಲ್ಲೆಯಲ್ಲಿ ನಡೆಯುವ ಎಲ್ಲ ಕ್ಷಿಂತೆಗಳನ್ನು ಮುಂದೂಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ ಮೂರ್ತಿ ಆದೇಶಿಸಿದ್ದಾರೆ.
ಹಾನಗಲ್ಲ ತಾಲೂಕು ಮಾಸನಕಟ್ಟಿ, ಅಕ್ಕಿಆಲೂರ, ಶಿಗ್ಗಾಂವಿ ತಾಲೂಕು ಬಂಕಾಪುರ, ಸವಣೂರ ತಾಲೂಕು ಹೆಸರೂರ, ಹಾವೇರಿ ತಾಲೂಕು ಬಸಾಪೂರ, ಕರ್ಜಗಿ, ಹಾವೇರಿ ಶಹರದ ಶಿವಬಸವನಗರ, ಬಾುಡಗಿ ತಾಲೂಕು ಹಿರೇಹಳ್ಳಿ, ಮಲ್ಲೂರು, ಹಿರೇಕೆರೂರ ತಾಲೂಕು ಕೋಡ ಗ್ರಾಮಗಳಲ್ಲಿ ಅಂದು ನಡೆಯಬೇಕಿದ್ದ ಸಂತೆಯನ್ನು ಕ್ಷಿುುಂದೂಡಲಾಗಿದೆ.