ಲಖನೌ: ಹಾಥರಸ್ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಪ್ರಕರಣದ ತನಿಖೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಿಬಿಐಗೆ ವಹಿಸಿದ್ದಾರೆ.
ಆದರೆ ಮೃತ ಸಂತ್ರಸ್ತೆಯ ಅಣ್ಣ ಇದು ಬೇಡವಾಗಿತ್ತು ಎಂದು ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಸ್ ತನಿಖೆಯನ್ನು ಈಗಾಗಲೇ ಎಸ್ಐಟಿ ನಡೆಸುತ್ತಿರುವುದರಿಂದ ಸಿಬಿಐಗೆ ವಹಿಸಿ ಎಂದು ನಾವು ಕೇಳಿರಲಿಲ್ಲ ಎಂದು ತಿಳಿಸಿದ್ದಾರೆ.
ನಿನ್ನೆ ಕಾಂಗ್ರೆಸ್ ಮುಖಂಡರಾದ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಹಾಥರಸ್ಗೆ ಭೇಟಿ ನೀಡಿ, ಮೃತ ಸಂತ್ರಸ್ತೆಯ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಜಗತ್ತಿನ ಯಾವ ಶಕ್ತಿಯೂ ಈ ಕುಟುಂಬದ ಧ್ವನಿ ಅಡಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.