More

    ದೇವಸ್ಥಾನಗಳಿಗೆ ಭೇಟಿ ನೀಡಿ, ಆ ಬಳಿಕವಾದರೂ ದೇವರು ಒಳ್ಳೆ ಬುದ್ದಿ ನೀಡಲಿ..

    ಹಾಸನ: ಶಾಸಕ ಎಚ್.ಡಿ. ರೇವಣ್ಣ ಜಿಲ್ಲೆಯಲ್ಲಿ ಕಟ್ಟಿಸಿರುವ ದೇವಸ್ಥಾನಗಳಿಗೆ ಒಂದು ಸಲ ಕ್ಷೇತ್ರ ಶಾಸಕ ಭೇಟಿ ನೀಡಬೇಕು. ಅಷ್ಟು ಮಾಡಿದರೆ ಖಂಡಿತ ಭಗವಂತ ಒಳ್ಳೆಯ ಬುದ್ದಿ ಕೊಡುತ್ತಾನೆ. ಆ ಬಳಿಕ ಸುಳ್ಳು ಹೇಳುವುದು ಕಡಿಮೆಯಾಗಬಹುದು ಎಂದು ಸಂಸದ ಪ್ರಜ್ವಲ್ ರೇವಣ್ಣ ಶಾಸಕ ಪ್ರೀತಂ ಗೌಡಗೆ ತಿರುಗೇಟು ನೀಡಿದರು.

    ತಾಲೂಕಿನ ತೇಜೂರು ಗ್ರಾಮದಲ್ಲಿ ಸೋಮವಾರ ಸಾಲಗಾಮೆಯಿಂದ ಬೇಲೂರು ಸಂಪರ್ಕಿಸುವ ಎರಡೂವರೆ ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

    ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೆಸರು ಹೇಳಿಕೊಂಡು ಚುನಾವಣೆ ಗೆದ್ದಿದ್ದೇನೆಂದು ಗಟ್ಟಿ ಧ್ವನಿಯಲ್ಲಿ ಹೇಳುತ್ತೇನೆ. ರಾಜಕಾರಣದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ರೇವಣ್ಣ ಅವರ ಆಶೀರ್ವಾದದಿಂದಲೇ ಸಂಸದನಾಗಿದ್ದೇನೆಂದು ಹೆಮ್ಮೆಯಿಂದ ಹೇಳುತ್ತೇನೆ. ಕ್ಷೇತ್ರ ಶಾಸಕನಾಗಿ ಏನು ಮಾಡಬೇಕೋ ಅದನ್ನು ಮಾಡಿಕೊಂಡಿರಲಿ ಎಂದು ವಾಗ್ದಾಳಿ ನಡೆಸಿದರು. ಶಾಸಕ ಪ್ರೀತಂ ಜೆ. ಗೌಡ ನನಗೆ ಬುದ್ದಿವಾದ ಹೇಳುವುದು ಬೇಡ. ನನ್ನನ್ನು ತಿದ್ದಿ ತೀಡಲು 50 ವರ್ಷ ರಾಜಕಾರಣ ಮಾಡಿದ ದೇವೇಗೌಡರು ಹಾಗೂ ರೇವಣ್ಣ ಇದ್ದಾರೆ ಎಂದು ಟೀಕಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts