ಹಾಸನ: ಸಾರಿಗೆ ಇಲಾಖೆ 85 ಕೋಟಿ ರೂ. ವರ್ಗಾವಣೆ ಡೀಲ್ ಮಾಡಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪ ಮಾಡಿದ್ದಾರೆ.
ಶಾಸಕರೊಬ್ಬರಿಗೆ ಗನ್ ಮ್ಯಾನ್ ಆಗಿದ್ದ ಮಲ್ಲಿಕಾರ್ಜುನ್ ಈಗ ಆರ್ಟಿಒ ಇನ್ಸ್ಪೆಕ್ಟರ್ ಆಗಿ ಬಿಜಾಪುರದಲ್ಲಿದ್ದಾರೆ. ಈತನೇ ಎಲ್ಲ ವರ್ಗಾವಣೆ ದಂಧೆಯ ರುವಾರಿ ಎಂದು ರೇವಣ್ಣ ಆರೋಪಿಸಿದ್ದಾರೆ.
ಇದನ್ನೂ ಓದಿ: ಹೈದರಾಬಾದ್ ಯುವತಿ ಜತೆ ಮದ್ವೆ: ಹನಿಮೂನ್ ಬೆನ್ನಲ್ಲೇ ಹೊಸ ವರಸೆ ತೆಗೆದ ಬೆಂಗಳೂರು ಟೆಕ್ಕಿ!
ರಾಜ್ಯದಲ್ಲಿ 14 ಚೆಕ್ಪೋಸ್ಟ್ ಇದೆ. ಪ್ರತೀ ತಿಂಗಳು 14 ಕೋಟಿ ರೂ.ನಂತೆ ವರ್ಷಕ್ಕೆ 120 ಕೋಟಿ ವಸೂಲಿಯಾಗುತ್ತಿದೆ ಎಂದು ರೇವಣ್ಣ, ಈ ಸರ್ಕಾರ ಇರೋವರೆಗೂ ಎಸಿಬಿ ಹಾಗೂ ಲೋಕಾಯುಕ್ತ ಬಂದ್ ಮಾಡೋದು ಒಳಿತು ಎಂದು ಟೀಕಿಸಿದರು.
ಸದ್ಯ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನ ಒಂದೊಂದೇ ಇಲಾಖೆಗಳ ದಾಖಲೆ ಸಮೇತ ಭ್ರಷ್ಟಾಚಾರ ಸಾಬೀತು ಮಾಡುವೆ ಎಂದು ರೇವಣ್ಣ ಸವಾಲು ಹಾಕಿದರು.
ಸೆಕ್ಸ್ ಲೈಫ್ಗೂ ಕರೊನಾ ಎಫೆಕ್ಟ್: ಸೋಂಕಿನಿಂದ ಪಾರಾಗಲು ಜನ ಮೊರೆ ಹೋದ ಸೆಕ್ಸ್ ಭಂಗಿಗಳಿವು!