ರಾಜ್ಕೋಟ್: ಆರಂಭಿಕ ಅಭಿಜೀತ್ ತೋಮರ್ (106 ರನ್, 129 ಎಸೆತ, 10 ಬೌಂಡರಿ, 2 ಸಿಕ್ಸರ್) ಶತಕದ ಹೊರತಾಗಿಯೂ ರಾಜಸ್ಥಾನ ತಂಡ ದೇಶೀಯ ಏಕದಿನ ಟೂರ್ನಿ ವಿಜಯ್ ಹಜಾರೆ ಟ್ರೋಫಿ ೈನಲ್ನಲ್ಲಿ ಹರಿಯಾಣ ಎದುರು 30 ರನ್ಗಳಿಂದ ಮುಗ್ಗರಿಸಿದೆ. ಇದರೊಂದಿಗೆ ಹರಿಯಾಣ ತಂಡ ಅಜೇಯವಾಗಿ ಚೊಚ್ಚಲ ದೇಶೀಯ ಏಕದಿನ ಕಿರೀಟ ಒಲಿಸಿಕೊಂಡಿದೆ.
ಶನಿವಾರ ನಡೆದ ಪ್ರಶಸ್ತಿ ಹೋರಾಟದಲ್ಲಿ ಹರಿಯಾಣ 8 ವಿಕೆಟ್ಗೆ 287 ರನ್ ಕಲೆಹಾಕಿತು. ಪ್ರತಿಯಾಗಿ ಆರಂಭಿಕ ಆಘಾತ ಬಳಿಕ, ಅಭಿಜೀತ್- ಕುನಾಲ್ ಸಿಂಗ್ ರಾಥೋರ್ (79) ಪ್ರತಿರೋಧದ ನಡುವೆಯೂ, ರಾಜಸ್ಥಾನ 48 ಓವರ್ಗಳಲ್ಲಿ 257 ರನ್ಗಳಿಗೆ ಸರ್ವಪತನ ಕಂಡಿತು. ವೇಗಿಗಳಾದ ಸುಮಿತ್ ಕುಮಾರ್ (34ಕ್ಕೆ3), ಹರ್ಷಲ್ ಪಟೇಲ್ (47ಕ್ಕೆ3) ಕಡಿವಾಣ ಹೇರಿದರು.
ಹರಿಯಾಣ: 8 ವಿಕೆಟ್ಗೆ 287 (ಅಂಕಿತ್ ಕುಮಾರ್ 88, ಆಶೋಕ್ 70, ನಿಶಾಂತ್ 29, ಸುಮಿತ್ 28*, ಅಂಕಿತ್ ಚೌಧರಿ 49ಕ್ಕೆ4).
ರಾಜಸ್ಥಾನ: 48 ಓವರ್ಗಳಲ್ಲಿ 257 (ಅಭಿಜೀತ್ 106, ಕುನಾಲ್ 79, ಕರಣ್ 20, ರಾಹುಲ್ 18, ಸುಮಿತ್ 34ಕ್ಕೆ3, ಹರ್ಷಲ್ 47ಕ್ಕೆ3).