More

    ಮದುವೆ ಸಮಾರಂಭದಲ್ಲಿ ಹೊಡೆದಾಟ, ಮೂವರ ಬಂಧನ

    ಉಳ್ಳಾಲ: ತೊಕ್ಕೊಟ್ಟು ಒಳಪೇಟೆಯಲ್ಲಿರುವ ಖಾಸಗಿ ಸಭಾಂಗಣದಲ್ಲಿ ಮದುವೆ ಸಮಾರಂಭವೊಂದರಲ್ಲಿ ಯುವತಿಗೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ತಂಡದ ನಡುವೆ ಹೊಡೆದಾಟ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

    ಕಾಸರಗೋಡು ಅಮೈ ನಿವಾಸಿಗಳಾದ ಶರಣ್(24), ಪ್ರಮೋದ್(24) ಮತ್ತು ಅಜೇಶ್(22) ಬಂಧಿತರು. ಗುರುವಾರ ತೊಕ್ಕೊಟ್ಟು ಒಳಪೇಟೆಯಲ್ಲಿರುವ ಖಾಸಗಿ ಸಭಾಂಗಣದಲ್ಲಿ ಕೋಟೆಕಾರು ಮಾಡೂರಿನ ವಧು ಮತ್ತು ಕಾಸರಗೋಡಿನ ವರನ ಮದುವೆ ನಡೆದಿತ್ತು. ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದ ವರನ ಕಡೆಯವನೆಂದು ಹೇಳಿಕೊಂಡ ಯುವಕನೋರ್ವ ವಧುವಿನ ಕಡೆಯ ಯುವತಿ ಮೇಲೆ ದೃಷ್ಟಿ ಹಾಕಿ ಆಕೆಯ ಹಿಂದೆ ಬಿದ್ದಿದ್ದ ಎನ್ನಲಾಗಿದೆ. ಅಷ್ಟಕ್ಕೂ ಸುಮ್ಮನಾಗದ ಆತ ಯುವತಿಯನ್ನು ಚುಡಾಯಿಸಿದ್ದ ಎನ್ನಲಾಗಿದ್ದು, ಈ ಬಗ್ಗೆ ಮಾಹಿತಿ ಅರಿತು ಆಕ್ರೋಶಿತನಾದ ಯುವತಿಯ ಸಹೋದರ ಕಿಡಿಗೇಡಿಗೆ ಹಲ್ಲೆ ನಡೆಸಿದ್ದಾನೆ.

    ಇದರಿಂದ ಆಕ್ರೋಶಿತರಾದ ಪೆಟ್ಟು ತಿಂದ ಯುವಕನ ಸ್ನೇಹಿತರು ಹಾಗೂ ಹಲ್ಲೆ ನಡೆಸಿದ ಯುವಕನ ಸ್ನೇಹಿತರ ನಡುವೆ ಗಲಾಟೆ, ಕೈಕೈ ಮಿಲಾಯಿಸುವ ಪ್ರಕರಣ ನಡೆದಿದೆ. ಈ ವೇಳೆ ಉಳ್ಳಾಲ ಉರುಸ್ ಬಂದೋಬಸ್ತ್‌ನಲ್ಲಿದ್ದ ಉಳ್ಳಾಲ ಪೊಲೀಸರು ಜಗಳ ತಡೆಯಲು ಮುಂದಾಗಿದ್ದು, ಆರೋಪಿಗಳು ಅವರ ಮೈಮೇಲೂ ಕೈಹಾಕಿದ್ದಾರೆ. ಇದರಿಂದ ಕುಪಿತರಾದ ಪೊಲೀಸರು ಹಲ್ಲೆಕೋರರನ್ನು ಅಟ್ಟಾಡಿಸಿ ಹಿಡಿದು ಉಳ್ಳಾಲ ಠಾಣೆಗೆ ಕೊಂಡೊಯ್ದು ಕೇಸು ದಾಖಲಿಸಿದ್ದಾರೆ. ಘಟನೆ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

    ಆರೋಪಿಗಳು ಪಾನಮತ್ತರಾಗಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದರು. ಇದನ್ನು ತಡೆಯಲು ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಬಜ್ಪೆ ಠಾಣೆ ಪೊಲೀಸ್ ಸುನಿಲ್ ಮತ್ತು ಗೃಹರಕ್ಷಕ ಸಿಬ್ಬಂದಿ ಮುಂದಾಗಿದ್ದು, ಆರೋಪಿಗಳು ಅವರ ಮೇಲೂ ಹಲ್ಲೆ ನಡೆಸಿದ್ದಾರೆಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts