ಹರಿಹರ: ಜಿಲ್ಲಾಧಿಕಾರಿ ಆದೇಶದಂತೆ ತಾಲೂಕು ಆಡಳಿತ ಗುರುವಾರ ನಗರದ ಪ್ರಮುಖ ರಸ್ತೆ ಹಾಗೂ ತರಕಾರಿ ಮಾರುಕಟ್ಟೆಗೆ ತೆರಳಿ ಮಾಸ್ಕ್ ಧರಿಸದ ವ್ಯಾಪಾರಿಗಳು ಹಾಗೂ ಅಂಗಡಿಗಳ ಮಾಲೀಕರಿಂದ ಸ್ಥಳದಲ್ಲೇ ದಂಡ ವಿಧಿಸಿ ಜಾಗೃತಿ ಮೂಡಿಸಿತು.
ವಸೂಲಿ ಮಾಡಿ, ನೀವು ತೋರುವ ಉದಾಸೀನ ಇನ್ನೊಬ್ಬರ ಜೀವಕ್ಕೆ ಕುತ್ತು ತರುತ್ತದೆ ಎಂದು ವಿವರಿಸಿದರು.
ದಂಡ ವಸೂಲಿ ಹಾಗೂ ಕೋವಿಡ್ ಜಾಗೃತಿ ಕಾರ್ಯದಲ್ಲಿ ತಹಸೀಲ್ದಾರ್ ಕೆ.ಬಿ.ರಾಮಚಂದ್ರಪ್ಪ, ತಾಲೂಕು ವೈದ್ಯಾಧಿಕಾರಿ ಡಾ.ಚಂದ್ರಮೋಹನ್, ಡಾ.ನಟರಾಜ್, ಡಾ.ರೇಣುಕಾರಾಧ್ಯ, ಎಂ.ಉಮ್ಮಣ್ಣ, ಪೇದೆಗಳಾದ ರಾಜಶೇಖರ್, ಶ್ರೀನಿವಾಸ್, ನಗರಸಭೆಯ ಸಂತೋಷ್, ಕಂದಾಯ ಇಲಾಖೆ ಆನಂದ್ ಇತರರಿದ್ದರು.