More

    ಮಾಜಿ ಶಾಸಕ ಅಶೋಕ್ ನಾಯ್ಕಗೆ ಜನ್ಮದಿನದ ಸಂಭ್ರಮ

    ಹೊಳೆಹೊನ್ನೂರು: ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ ಜನ್ಮದಿನವನ್ನು ಅವರ ಅಭಿಮಾನಿಗಳು ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಹಾಗೂ ಸಿಹಿ ಹಂಚುವ ಮೂಲಕ ಆಚರಿಸಿದರು.

    ಮಲ್ಲೇಶಂಕರ ದೇವಸ್ಥಾನ, ಪಿಳ್ಳಂಗಿರಿಯ ರಂಗನಾಥಸ್ವಾಮಿ ದೇವಾಲಯ, ಮಲ್ಲಾಪುರದ ಗುಡ್ಡದ ಮಲ್ಲೇಶ್ವರ ಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಹೊಳೆಹೊನ್ನೂರಿನ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು-ಹಣ್ಣು ವಿತರಿಸಿದರು. ನೆಚ್ಚಿನ ಶಾಸಕನಿಗೆ ಶುಭ ಕೋರಿದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕೇಕ್ ಕತ್ತರಿಸಿ, ಸಿಸಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಸುಬ್ರಹ್ಮಣಿ, ಪ್ರಧಾನ ಕಾರ್ಯದರ್ಶಿ ಮಲ್ಲೇಶ್, ಪ್ರಮುಖರಾದ ಎಸ್.ಶ್ರೀನಿವಾಸ್, ಕಿರಣ್ ಕುಮಾರ್, ರಾಧಾಕೃಷ್ಣ, ಸತೀಶ್‌ಗೌಡ, ಸದಾಶಿವಪ್ಪಗೌಡ, ಎಚ್.ಎನ್.ರುದ್ರೇಶಪ್ಪ, ಶಂಕರಮೂರ್ತಿ, ನಾಗೇಶ್ವರ ರಾವ್, ಕುಬೇಂದ್ರಪ್ಪ, ವೀರೇಶಪ್ಪ, ದಯಾನಂದ, ಸಾಗರ್, ಬಸವನಗೌಡ, ಹಾಲೋಜಿ ರಾವ್, ಚಿದಾನಂದಮೂರ್ತಿ, ಜಯಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts